Wednesday, March 26, 2025
Google search engine
Homeಉದ್ಯೋಗಗದಗ : ಡಾ|| ಶ್ರೀ ಪಂಡಿತ ಪುಟ್ಟರಾಜ ರೈತ ಸಂಘದ ವತಿಯಿಂದ ೬೯ನೆಯ ರಾಜ್ಯೋತ್ಸವ ಆಚರಣೆ

ಗದಗ : ಡಾ|| ಶ್ರೀ ಪಂಡಿತ ಪುಟ್ಟರಾಜ ರೈತ ಸಂಘದ ವತಿಯಿಂದ ೬೯ನೆಯ ರಾಜ್ಯೋತ್ಸವ ಆಚರಣೆ

ಹೊಸ ಸದಸ್ಯರಿಗೆ ಆದೇಶ ಪ್ರತಿ ವಿತರಣಾ ಕಾರ್ಯಕ್ರಮ

ಗದಗ ೦೧: ದಿನಾಂಕ ೦೧/೧೧/೨೦೨೪ ಶುಕ್ರವಾರ ೬೯ನೇ ರಾಜ್ಯೋತ್ಸವ ನಿಮಿತ್ಯ ಡಾ. ಪಂಡಿತ ಪುಟ್ಟರಾಜ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಎಂ ಪಿ ಮುಳುಗುಂದ ಇವರ ನೇತೃತ್ವದಲ್ಲಿ ಗದಗ ನಗರದ ಗುಜ್ಜರಬಸ್ತಿ ರೋಡನಲ್ಲಿ ಇರುವ ಕಾರ್ಯಾಲಯದಲ್ಲಿ ಶ್ರೀ ಭುವನೇಶ್ವರಿ ಮಾತೆಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷರು ಶ್ರೀಗಂಧದ ಬೀಡು ಶಾಂತಿ, ನೆಮ್ಮದಿ, ಹಸಿರು ಬಣ್ಣಗಳಿಂದ, ಕೊಂಗೊಳಿಸುವ ಗಿರಿ ಶಿಖರಗಳ ಬೀಡು ಅಗ್ರಗಣಿ ಸಂಪತ್ತು ಹೊಂದಿರುವ ಸಿರಿನಾಡು ಕರ್ನಾಟಕ, ದೇಶದಲ್ಲಿ ಮಾದರಿಯ ರಾಜ್ಯವಾಗಿರುವುದು ನಮ್ಮೆಲ್ಲರ ಹೆಮ್ಮೆ ಇಂತಹ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ ಎಂದು ಸಂಸ್ಥಾಪಕ ಅಧ್ಯಕ್ಷರು ತಮ್ಮ ಅನಿಸಿಕೆಯಲ್ಲಿ ತಿಳಿಸಿದರು. 

ಕಾರ್ಯಕ್ರಮದಲ್ಲಿ ರೈತ ಸಂಘದ ಗೌರವಾನ್ವಿತ ಅಧ್ಯಕ್ಷರಾದ ಶ್ರೀ ಅಶೋಕ ಬಶೆಟ್ಟಿಯವರು, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಶ್ರೀ ದಾವಲಸಾಬ ನಾಗನೂರ, ಹಿರಿಯರಾದ ಹಾಜಿಅಲಿ ಎಚ್ ಕೊಪ್ಪಳ, ಸಂಘದ ಪದಾಧಿಕಾರಿಗಳಾದ ಶ್ರೀ ಪ್ರಭಾಕರ ಜುಟ್ಲಾದ, ಶ್ರೀ ಚಾಂದಸಾಬ ಬೂದ್ಲೆಖಾನ, ಶ್ರೀ ಶಂಕ್ರಪ್ಪ ಮಹಂತ ಶೆಟ್ರು, ಶ್ರೀಮತಿ ರೇಖಾ ಬೆಂತೂರ ಶ್ರೀಮತಿ ಕವಿತಾ ಗುಡೂದೂರ ಶ್ರೀಮತಿ ರೇಣುಕಾ ನಾಗಾವಿ ಮತ್ತು ಅನೇಕ ಶಾಲಾ ಮಕ್ಕಳು ಮತ್ತು ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಇದೇ ಸಂದರ್ಭದಲ್ಲಿ ಸಂಘಕ್ಕೆ ಹೊಸ ಸದಸ್ಯರಾಗಿ ಶ್ರೀ ವೆಂಕಟೇಶ ಈರಪ್ಪ ಜಡಿ ಇವರು ಆದೇಶ ಪಡೆದುಕೊಂಡು ಸೇರ್ಪಡೆಗೊಂಡರು ಕಾರ್ಯಕ್ರಮವನ್ನು ಹಾಜಿಅಲಿ ಎಚ್ ಕೊಪ್ಪಳ ಇವರು ನೆರವೇರಿಸಿದರು. 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ