ಗದಗ:- ಹಾವೇರಿ-ಗದಗ ಲೋಕಸಭಾ ಬಿಜೆಪಿ ಅಬ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಮತಬೇಟೆ ಮಾಡಿದ್ದಾರೆ. ಗದಗ ನಗರದ ನಾಮಜೊಶಿ ರಸ್ತೆ, ಗ್ರೇನ್ ಮಾರ್ಕೆಟ್ ನಲ್ಲಿ ಮತಯಾಚನೆ ನಡೆಸಿದ್ದಾರೆ.
ಪ್ರತಿಯೊಂದು ಅಂಗಡಿ ಮಳಿಗೆಗಳಿಗೆ ತೆರಳಿ ಬೊಮ್ಮಾಯಿಯವರಿಗೆ ಮತ ನೀಡುವಂತೆ ಮನವಿ ಮಾಡಿದ್ದಾರೆ. ಜೊತೆಗೆ ಬೀದಿ ಬದಿ ವ್ಯಾಪಾರಸ್ಥರಿಗೆ ಜಿಜೆಪಿ ಗೆಲ್ಲಿಸುವಂತೆ ಮನವಿ ಮಾಡಿದ್ದು, ದೇಶದ ಉಳಿವಿಗಾಗಿ ಬಿಜೆಪಿಗೆ ಮತ ನೀಡಿ ಎಂದು ಅನಿಲ್ ಮತಯಾಚನೆ ಮಾಡಿದರು.
ಅನಿಲ್ ಗೆ ಮುಖಂಡ ವಸಂತ ಪಡಗದ, ಇರ್ಷಾದ್ ಮಾನ್ವಿ, ಶರಣು ಚಿಂಚಲಿ, ಉಡಚಪ್ಪ ಸೇರಿದಂತೆ ಮುಖಂಡರು ಕಾರ್ಯಕರ್ತರು ಸಾಥ್ ಕೊಟ್ಟಿದ್ದಾರೆ.