ಗದಗ : ಗದಗ ಜಿಲ್ಲೆಯ ನರಗುಂದ ತಾಲೂಕಿನ ಶಿವಾನಂದ ಮಾಯಣ್ಣವರ್ ಇವರನ್ನು ಅಹಿಂದ ಸಂಘಟನೆ ಗದಗ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಎಂದು ಕರ್ನಾಟಕ ರಾಜ್ಯ ಕಾರ್ಯಕಾರಿ ಸಮಿತಿಯಿಂದ ಆಯ್ಕೆ ಮಾಡಲಾಗಿದೆ. ಎಂದು ಪ್ರಭುಲಿಂಗ ದೊಡ್ಡಿನಿ ಅಧ್ಯಕ್ಷರು ಅಹಿಂದ ಕರ್ನಾಟಕ ರಾಜ್ಯ ಸಂಘಟನೆ ಅವರು ಹೇಳಿದರು.
ಅಹಿಂದ ಸಮಾಜವನ್ನು ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಸದೃಢ ಮತ್ತು ಬಲಿಷ್ಠ ಮಾಡಲು ಶಿಕ್ಷಣ ಸಂಸ್ಥೆ ಶಾಲೆಗಳು ಮತ್ತು ಬ್ಯಾಂಕುಗಳು ಸ್ಥಾಪಿಸುವ ಗುರಿಯನ್ನು ಈ ಸಂಘಟನೆ ಹೊಂದಿದೆ ಎಂದು ಕರ್ನಾಟಕ ರಾಜ್ಯ ಅಹಿಂದ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಭುಲಿಂಗ ದೊಡ್ಡಿನಿ ತಿಳಿಸಿದ್ದಾರೆ.
ಎರಡನೇ ಹಂತದ ಅಹಿಂದ ನಾಯಕರು ಎಂದು ಆಯ್ಕೆ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಇವರನ್ನು ಶಾಸಕರು, ಸಂಸದರು ಮಾಡಬೇಕು. ಹಾಗೂ ರಾಜಕೀಯವಾಗಿ ಬಲಿಷ್ಠರನ್ನಾಗಿ ಮಾಡಬೇಕು .ಅಹಿಂದ ಸಂಘಟನೆಯನ್ನು ಕರ್ನಾಟಕ ಸರ್ಕಾರದಿಂದ ನೋಂದಣಿ ಸಂಖ್ಯೆ:DRDW/SOR/497/2023-24 ಅನುಮತಿ ಪಡೆದಿದೆ.
ಅಹಿಂದ ಸಮಾಜವನ್ನು ಸಾಮಾಜಿಕವಾಗಿ ರಾಜಕೀಯವಾಗಿ ಶೈಕ್ಷಣಿಕವಾಗಿ ಸದೃಢ ಮತ್ತು ಬಲಿಷ್ಠ ಮಾಡಲು ಶಿಕ್ಷಣ ಸಂಸ್ಥೆ ಶಾಲೆಗಳು,ಮತ್ತು ಬ್ಯಾಂಕುಗಳು ಸ್ಥಾಪಿಸುವ ಗುರಿಯನ್ನು ಈ ಸಂಘಟನೆ ಹೊಂದಿದೆ. ಶಿವಾನಂದ್ ಮಾಯಣ್ಣವರ್ ಅವರಿಗೆ ಕರ್ನಾಟಕ ರಾಜ್ಯ ಅಹಿಂದ ಸಮುದಾಯದ ಎಲ್ಲಾ ಬಂಧುಗಳ, ಪರವಾಗಿ ಶ್ರೀ ಪ್ರಭುಲಿಂಗ ದೊಡ್ಡಿನಿ ಅಧ್ಯಕ್ಷರು ಅಹಿಂದ ಕರ್ನಾಟಕ ರಾಜ್ಯ ಸಂಘಟನೆ ವತಿಯಿಂದ ಅಭಿನಂದನೆಗಳು.
ನಮ್ಮ ಒಕ್ಕೂಟದ ರಾಜ್ಯಾಧ್ಯಕ್ಷರಾದ ಪ್ರಭುಲಿಂಗ ದೊಡ್ಡಮನಿ ಅವರು ನನ್ನನ್ನು ಗದಗ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು, ನನ್ನ ತತ್ವ ಸಿದ್ಧಾಂತದಂತೆ ಪ್ರಾಮಾಣಿಕವಾಗಿ
ಮಾಡಿಕೊಂಡು ಹೋಗುತ್ತೇನೆ. ಮುಂದಿನ ದಿನಗಳಲ್ಲಿ ಅಹಿಂದ ದಲಿತ ಸಮುದಾಯದ ಆರ್ಥಿಕ ಸದೃಢತೆಗಾಗಿ ಕೆಲಸ ಮಾಡುತ್ತ ಒಕ್ಕೂಟದ ಸಂಘಟನೆಗಾಗಿ ಹೋಬಳಿ, ಗ್ರಾಮ ಮಟ್ಟದಲ್ಲಿ ಶಾಖೆಗಳನ್ನು ತೆರೆದು ಅಹಿಂದ ಸಮುದಾಯದ ಧ್ವನಿಯಾಗಿ ಕೆಲಸ ಮಾಡುತ್ತೇನೆ.ಎಂದು ಹೇಳಿದರು
ಶಿವಾನಂದ್ ಮಾಯಣ್ಣವರ್
ಜಿಲ್ಲಾ ಉಪಾಧ್ಯಕ್ಷರು
ಗದಗ ಜಿಲ್ಲಾ ಅಹಿಂದ ಸಂಘಟನೆ