31.7 C
New York
Sunday, July 6, 2025

Buy now

spot_img

ಗದಗ : ವ್ಯಕ್ತಿ ಕಾಣೆ : ಬೆಟಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು

ಗದಗ : ವ್ಯಕ್ತಿ ಕಾಣೆಯಾದ ಬಗ್ಗೆ : ಬೆಟಗೇರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಬೆಟಗೇರಿ ಪೊಲೀಸ ಠಾಣೆ ಗುನ್ನಾ ನಂ. 16/2025 ಕಲಂ: ಮನುಷ್ಯ ಕಾಣೆ

ಈ ಪ್ರಕರಣದಲ್ಲಿಯ ಪಿರ್ಯಾಧಿದಾರಳಾದ ದೇವಕ್ಕ ಕೋಂ ಹುಚ್ಚಪ್ಪ ಪೂಜಾರ, ವಯಸ್ಸು: 42 ವರ್ಷ, ಜಾತಿ: ಹಿಂದೂ ಮಾದರ. ಉದ್ಯೋಗ: ಕೂಲಿ ಕೆಲಸ, ಸಾ||ನಾಗಸಮುದ್ರ, ತಾ॥ಜಿ॥ಗದಗ ಇವಳ ಗಂಡ ಹುಚ್ಚಪ್ಪ ತಂದೆ ದುಂಡಪ್ಪ ಪೂಜಾರ. ವಯಸ್ಸು: 48 ವರ್ಷ, ಜಾತಿ: ಹಿಂದೂ ಮಾದರ, ಉದ್ಯೋಗ: ಗೌಂಡಿ ಕೆಲಸ, ಸಾ॥ ನಾಗಸಮುದ್ರ, ತಾಜಿ। ಗದಗ ಇವನು ವೀಪರಿತವಾಗಿ ಸರಾಯಿಯನ್ನು ಕುಡಿಯುವ ಚಟವನ್ನು ಹೊಂದಿದ್ದು ಯಾವಾಗಲೂ ಸರಾಯಿಯನ್ನು ನಿಷೆಯಲ್ಲಿರುತ್ತಿದ್ದನು.

 ಸದರಿಯವನು ದಿನಾಂಕ: 09/02/2025 ರಂದು ಮುಂಜಾನೆ: 11-30 ಗಂಟೆಯ ಸುಮಾರಿಗೆ ನಾಗಸಮುದ್ರ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಬೆಟಗೇರಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವನು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾದ ತನ್ನ ಗಂಡನಿಗೆ ಫಿರ್ಯಾದಿದಾರಳು ಮತ್ತು ಅವರ ಮನೆಯವರು ಇಲ್ಲಿಯವರೆಗೆ ಹುಡುಕಾಡಿ ಅವನು ಸಿಗದಿದ್ದರಿಂದ ಈ ದಿವಸ ತಡವಾಗಿ ಠಾಣೆಗೆ ಬಂದು ಕಾಣಿಯಾದ ತನ್ನ ಗಂಡನಿಗೆ ಹುಡುಕಿ ಕೊಡುವಂತೆ ದಸ್ತರ ಅಖಿತ ಪಿರ್ಯಾಧಿಯನ್ನು ಕೊಟ್ಟಿದ್ದನ್ನು ಸ್ವೀಕರಿಸಿಕೊಂಡು ಬೆಟಗೇರಿ ಪೊಲೀಸ್ ಠಾಣಾ ಗುನ್ನಾ ನಂಬರ್: 16/2025 ಕಲಂ: ಮನುಷ್ಯ ಕಾಣಿ ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ಮನುಷ್ಯನ ಚಹರೆ ಕೆಳಗಿನಂತೆ ಇರುತ್ತದೆ.

ಹೆಸರು: ಹುಚ್ಚಪ್ಪ ತಂದೆ ದುಂಡಪ್ಪ ಪೂಜಾರ, 

ವಯಸ್ಸು: 48 ವರ್ಷ, ಜಾತಿ: ಹಿಂದೂ ಮಾದರ, ಉದ್ಯೋಗ: ಗೌಂಡಿ ಕೆಲಸ,ಎತ್ತರ: 5 ಪೂಟ್ 5 ಇಂಚು ಸಾ|| ನಾಗಸಮುದ್ರ, ತಾಜಿ॥ ಗದಗ.

ಬೆಹೆರೆ: ಸಾಧಾರಣವಾದ ಮೈಕಟ್ಟು, ದುಂಡ ಮುಖ, ಕಪ್ಪು ಮೈ ಬಣ್ಣ, ಚಪ್ಪಟೆ ಮೂಗು, ಕಪ್ಪು ಕಣ್ಣು. ತಲೆಯಲ್ಲಿ ಬಿಳಿ ಕೂದಲು. ಮುಂದಿನ 4 ಹಲ್ಲುಗಳು ಊದುರಿರುತ್ತವೆ. ಬಲಗೈಯಲ್ಲಿ “ದೇವಿ ಹುಚ್ಚಪ್ಪ” ಅಂತಾ ಹಚ್ಚೆ ಇರುತ್ತದೆ. ಬಲಕುತ್ತಿಗೆಯ ಮೇಲೆ ಹಳೆಯ ಮಾದ ಗಾಯದ ಕಲೆ ಇರುತ್ತದೆ. ಬಲಗಾಲು ಕುಂಟುತ್ತಾನೆ.

ಉಡುಪು: ಮನೆಯಿಂದ ಹೋಗುವಾಗ ಬಿಳಿ ಮತ್ತು ನೀಲಿ ಬಣ್ಣ ಮಿಶ್ರಿತ ಚೆಕ್ಸ್ ಶರ್ಟ್, ನೀಲಿ ಬಣ್ಣದ ಚೆಕ್ಸ್ ಲಪಾಟಿ(ಲುಂಗಿ) ತೆಲೆಗೆ ಕಂದು ಬಣ್ಣದ ಉಣ್ಣೆ ಟೊಪ್ಪಿಗೆ ಧರಿಸಿರುತ್ತಾನೆ.

ಭಾಷೆ: ಕನ್ನಡ ಬಾಷೆ ಮಾತನಾಡುತ್ತಾನೆ.

ಮೇಲೆ ಕಾಣಿಸಿದ ಫೋಟೋದಲ್ಲಿರುವ ಚಹರೆಯುಳ್ಳ ಮನುಷ್ಯನು ಕಂಡು ಬಂದಲ್ಲಿ ಈ ಕೆಳಗಿನ ವಿಳಾಸಕ್ಕೆ ತಿಳಿಸಲು ಕೋರಲಾಗಿದೆ. ಬೆಟಗೇರಿ ಪೊಲೀಸ್ ಠಾಣೆ: 08372-246333. ಪಿ.ಎಸ್.ಐ. ಬೆಟಗೇರಿ ಪೊಲೀಸ್ ಠಾಣೆ9480804449betagerigdg@ksp.gov.indcgdg@ksp.gov.in

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : 2025-26ನೇ ಸಾಲಿನ ವಿಕಲಚೇತನರಿಗಾಗಿ ವಿದ್ಯಾರ್ಥಿವೇತನ ಯೋಜನೆಯಡಿ ಅರ್ಜಿ ಆಹ್ವಾನ ಗದಗ : ಸರ್ಕಾರಿ ಶಾಲಾ ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ಬಿಸಿಯೂಟ ಸವಿದ ಸಿಇಒ ಗದಗ : ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಬಸವರಾಜ ಬಳ್ಳಾರಿ ಆಯ್ಕೆ ಗದಗ : ನರಗುಂದದಲ್ಲಿ ಜುಲೈ 9 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ “ನಮ್ಮ ಶಾಲೆ ನಮ್ಮ ಜವಾಬ್ದಾರಿ” : ರೋಣ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮ" ಗದಗ : ವಚನ ಸಾಹಿತ್ಯದ ತತ್ವಗಳನ್ನು ಯುವಜನಾಂಗ ಮೈಗೂಡಿಸಿಕೊಳ್ಳಬೇಕು: ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಗದಗ : ಹಿಂದೂ ಮುಸ್ಲಿಂ ಭಾವೈಕ್ಯತೆಯ ಹಬ್ಬ ಮೊಹರಂ - ಅಬ್ದುಲ್ ಮುನಾಫ್ ಮುಲ್ಲಾ  ಗದಗ : ಮಕ್ಕಳಿಗೆ ವಿದ್ಯೆಯ ಜೊತೆ ಆರೋಗ್ಯವೂ ಮುಖ್ಯ : ಡಾ. ಪ್ರಜ್ಜಲ ಎಂ ಹಿರೇಮಠ  ಗದಗ : ಯಕ್ಷಗಾನ ; ಸಿರಿಸಿಂಗಾರಿ ಭಾಗ್ಯದಂಬಾರಿ”  ಗದಗ : ಜಿಲ್ಲಾ ನೋಟರಿ ಸಂಘದ ವತಿಯಿಂದ  ಬೀಳ್ಕೊಡುಗೆ ಮತ್ತು ಸನ್ಮಾನ ಕಾರ್ಯಕ್ರಮ