ಗದಗ ೨೮:: ಮುಂಡರಗಿ ತಾಲೂಕ ಸಾರ್ವಜನಿಕ ಹೋರಾಟ ವೇದಿಕೆ ಆಶ್ರಯದಲ್ಲಿ ಇಂದು ೨೮-೧೦-೨೦೨೪ ರಂದು ಸೋಮವಾರ ದಿವಸ ಬೆಳಿಗ್ಗೆ ರೈತರ ಪ್ರತಿಭಟನೆಯಲ್ಲಿ ತಾಮ್ರಗುಂಡಿ ಕೆರೆಯ ಹತ್ತಿರ ಚಾಲನೆ ನೀಡಲಾಯಿತು.
ಬಸವರಾಜ ಯಲ್ಲಪ್ಪ ನವಲಗುಂದ ಸಂಚಾಲಕರು ಮುಂಡರಗಿ ತಾಲೂಕಾ ಸಾರ್ವಜನಿಕ ಹೋರಾಟ ವೇದಿಕೆಯವರು ಮಾತನಾಡುತ್ತ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಹೊಬಳಿ ವ್ಯಾಪ್ತಿಯಲ್ಲಿ ಬರುವ ಮುರಡಿ, ತಾಮ್ರಗುಂಡಿ ಗ್ರಾಮದ ಕೆರೆಯ ಸಲುವಾಗಿ ಮುರಡಿ ಕೆರೆಗೆ ೩೧೨ ಎಕರೆ ಭೂಸ್ವಾಧಿನ ಪಡಿಸಿಕೊಂಡಿದ್ದು ತಾಮ್ರಗುಂಡಿ ರೈತರ ಆರುವರೆ ಎಕರೆ ಭೂಸ್ವಾಧೀನಪಡಿಸಿಕೊಂಡಿದ್ದು ಅದಕ್ಕೆ ಪರಿಹಾರ ಕೊಡದೇ ಇರುವ ಕಾರ್ಯನಿರ್ವಾಹಕ ಇಂಜನೀಯರರು ಸಣ್ಣ ನೀರಾವರಿ ಇಲಾಖೆ ಧಾರವಾಡರವರ ಕಾರ್ಯಲಯಕ್ಕೆ ಮುತ್ತಿಗೆ ಹಾಕಲು ರೈತರ ಹೋರಾಟ ಯಶಸ್ವಿಗೊಳಿಸಬೇಕೆಂದು ಹೋರಾಟಕ್ಕೆ ಚಾಲನೆ ನೀಡಿ ಸರ್ಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಚನ್ನವೀರಪ್ಪ ಅಂಗಡಿ, ಮಲ್ಲಪ್ಪ ಅಂಗಡಿ, ಸಿದ್ದಲಿಂಗೇಶ ಚನ್ನವೀರಪ್ಪ ಅಂಗಡಿ, ಬಸಪ್ಪ ವಡ್ಡರ, ಬಸವರಾಜ ಬನ್ನಿಕೊಪ್ಪ ಮುಂತಾದವರು ಉಪಸ್ಥಿತರಿದ್ದರು.