27.4 C
New York
Saturday, May 17, 2025

Buy now

spot_img

ಗದಗ : ಜಿ.ಪಿ.ಎಲ್. ಗದಗ ಪ್ರೀಮಿಯರ್ ಲೀಗ್ -೨೦೨೪ ನೇ ೨ನೇ ಆವೃತ್ತಿ ಆರಂಭ

ಗದಗ ೦೯: ಜಿ.ಪಿ.ಎಲ್. ಗದಗ ಪ್ರೀಮಿಯರ್ ಲೀಗ್ -೨೦೨೪ ನೇ ಆವೃತ್ತಿ ಲೇದರ ಬಾಲ್ ಕ್ರಿಕೆಟ್ ಈಗ ಮತ್ತೆ ಪ್ರಾರಂಭವಾಗುತ್ತಿದೆ. ಇದೇ ತಿಂಗಳು ದಿನಾಂಕ ಸೆಪ್ಟೆಂಬರ ೧೧ನೇ ತಾರೀಖು ನೋಂದಣಿ ಮಾಡಿಸಿ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ ಎಂದು ಜಿಪಿಎಲ್ ಕಮೀಟಿಯ ಸದಸ್ಯರು ತಿಳಿಸಿದ್ದಾರೆ. ನೋಂದಣಿ ಮಾಡಿಸಲು ಶಿವರಾಜ ಕರಡಿ (೯೮೮೬೩೬೦೪೩೮) ಮತ್ತು ಅಸ್ಲಂ ಮುಧೋಳ (೯೭೩೯೫೬೭೦೩೦) ಅವರನ್ನು ಸಂಪರ್ಕಿಸಬೇಕು.

ಗದಗ ಪ್ರೀಮಿಯರ್ ಲೀಗ್ ಆವೃತ್ತಿ ೧ ಅನ್ನು ಹಿಂದಿನ ವರ್ಷ ೨೦೨೩ ರಲ್ಲಿ ನಡೆಸಲಾಗಿತ್ತು. ಜಿ.ಪಿ.ಎಲ್. ೧ ನೇ ಆವೃತ್ತಿಯನ್ನು ವಿಮಲ್ ರೆಸಾರ್ಟ ಮಾಲೀಕತ್ವದ ತಂಡವಾದ ಗದಗ ಟೈಟಾನ್ ತಂಡ ಜಿ.ಪಿ.ಎಲ್. ಆವೃತ್ತಿ ೧ರ ವಿಜೇತ ತಂಡವಾಗಿ ಹೊರಹೊಮ್ಮಿತ್ತು. ಇದು ಲೇದರಬಾಲ್ ಕ್ರಿಕೆಟ ಲೀಗ್ ಆಗಿರುತ್ತದೆ. ಕಳೆದ ಬಾರಿ ಯಶಸ್ವಿಯಾಗಿ ನೆರವೇರಿಸಲಾಗಿತ್ತು ಟೂರ್ನಿಯು ಗದಗ ಜನತೆಯ ಮೆಚ್ಚುಗೆಗೆ ಪಾತ್ರವಾಗಿತ್ತು.

ಜಿ.ಪಿ.ಎಲ್. ಲೇದರ ಬಾಲ್ ಕ್ರಿಕೆಟ್ ಲೀಗ್ ಗದಗ ಜಿಲ್ಲೆಯ ಕ್ರಿಕೆಟ್ ಕ್ರೀಡಾಪಟುಗಳಿಗೆ ಸೀಮಿತವಾಗಿರುತ್ತದೆ. ಮತ್ತು ಜಿ.ಪಿ.ಎಲ್ ಗದಗ ಪ್ರೀಮಿಯರ್ ಲೀಗ್ ಬಿಳಿ ಲೇದರ ಬಾಲ್ ಕ್ರಿಕೆಟ್ ಲೀಗ್ ಐಪಿಎಲ್ ಮಾದರಿಯಲ್ಲಿ ನಡೆಯಲಿದೆ. ಇದು ಆಕ್ಷನ್ ಬೇಸ್ಡ್ ಕ್ರಿಕೆಟ್ ಲೀಗ್ ಆಗಿರುತ್ತದೆ. ಇದೇ ತಿಂಗಳು ಕೊನೆಯ ವಾರದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ ಹಾಗೂ ಅಕೋಬರ್ ತಿಂಗಳಲ್ಲಿ ಜಿ.ಪಿ.ಎಲ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲಾಗುತ್ತದೆ ಎಂದು ಜಿ.ಪಿ.ಎಲ್. ಕಮೀಟಿ ಸದಸ್ಯರು ತಿಳಿಸಿದ್ದಾರೆ.

ಕ್ರಿಕೆಟ್ ಕ್ರೀಡಾಪಟುಗಳು, ಕ್ರಿಕೆಟ್ ಕ್ರೀಡಾ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದು, ಗದಗ ಜಿಲ್ಲೆಯ ಕ್ರಿಕೆಟ್ ಕ್ರೀಡಾಪಟುಗಳಿಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಕ್ರಿಕೆಟ್ ಪಟುಗಳು ಆದಷ್ಟು ಬೇಗನೇ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿ ಅರ್ಜಿ ಸಲ್ಲಿಸಬೇಕು. ಗದಗ ಜಿಲ್ಲೆಯಲ್ಲಿ ಲೆದರ್ ಬಾಲ್ ಕ್ರಿಕೆಟ್ ಕ್ರೀಡೆಯನ್ನು ಬೆಳೆಸಲು ಇದು ಒಂದು ಸದಾವಕಾಶವಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
“ಅಮೃತ-ಸುರಭಿ ಯೋಜನೆ” ಹೈನೋದ್ಯಮದ ಅಭಿವೃದ್ಧಿಗೆ ಹೊಸ ಆಶಾಕಿರಣ ಗದಗ  : ತುರ್ತು ಪರಿಸ್ಥಿತಿ ನಿರ್ವಹಣೆಗೆ ಅಣುಕು ಪ್ರದರ್ಶನ ಸಹಕಾರಿ ಗದಗ : ಆನ್‌ಲೈನ್ ಮೂಲಕ ಐ.ಟಿ.ಐ ಪ್ರವೇಶಕ್ಕೆ ಅರ್ಜಿ ಆಹ್ವಾನ ಗದಗ : ಗಂಜೇಂದ್ರಗಡದಲ್ಲಿ  ಬೀದಿನಾಯಿಗಳ ದಾಳಿಗೆ  ಮಹಿಳೆ ಸಾವು.! ಗದಗ : ಯುದ್ಧ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ