Wednesday, March 26, 2025
Google search engine
Homeಆರೋಗ್ಯಗದಗ : 22 ನೇ ವಾರ್ಡಿನ ತಾಜ್ ನಗರದ ರಸ್ತೆಯೋ ಅಥವಾ ಯಮಲೋಕಕ್ಕೆ ಕರೆದೋಯುವ ದಾರಿಯೋ?...

ಗದಗ : 22 ನೇ ವಾರ್ಡಿನ ತಾಜ್ ನಗರದ ರಸ್ತೆಯೋ ಅಥವಾ ಯಮಲೋಕಕ್ಕೆ ಕರೆದೋಯುವ ದಾರಿಯೋ? ರಸ್ತೆ ದುರಸ್ತಿ ಕಾರ್ಯ ಯಾವಾಗ ?

ಗದಗ: ನಗರದ ಹುಬ್ಬಳ್ಳಿ ರಸ್ತೆಯಲ್ಲಿರುವ ೨೨ ನೇ ವಾರ್ಡಿನ ತಾಜ್ ನಗರದ ರಸ್ತೆಯೋ ಅಥವಾ ಯಮಲೋಕಕ್ಕೆ ಕರೆದೋಯುವ ದಾರಿಯೋ ? ಎಂದು ಸಾರ್ವಜನಿಕರು ನಗರಸಭೆಗೆ ಹಿಡಿ ಶಾಪ ಹಾಕುತ್ತಿದ್ದಾರೆ ನಗರಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ರಸ್ತೆಯನ್ನು ಕಂಡು ಕಾಣದಂತೆ ಇದೇ ರಸ್ತೆಯಲ್ಲಿ ಸಂಚರಿಸುವುದು ಸಾರ್ವಜನಿಕರು ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ಅರಿವೇ ಇಲ್ಲದ ಹಾಗೆ ಇರುವುದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಕೇವಲ ಕಾರಿನಲ್ಲಿ ಸಂಚರಿಸುವುದು ಅಲ್ಲ ನಗರದ ೨೨ನೇ ವಾರ್ಡಿನ ರಸ್ತೆಯ ದುರಸ್ತಿಯ ಬಗ್ಗೆ ಗಮನ ಹರಿಸಬೇಕು ರಸ್ತೆಯಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತಿದ್ದರು ನಗರಸಭೆಯ ಚುನಾಯಿತ ಪ್ರತಿನಿಧಿಗಳು ಚುನಾವಣೆಗೆ ಬಂದಾಗ ಮಾತ್ರ ಬಂದು ಹೋಗುತ್ತಾರೆ ಮತ್ತೆ ಈ ವಾರ್ಡಿನ ಸಮಸ್ಯೆಯ ಕುರಿತು ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಹಿರಿಯ ನಾಗರಿಕರಿಗೆ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮಹಿಳೆಯರಿಗೆ ಅದರಲ್ಲಿಯೂ ಗರ್ಭಿಣಿ ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸುವುದರಿಂದ ಅನಾಹುತಗಳಿಗೆ ಆಹ್ವಾನಿಸುತ್ತಿರುವ ಹಾಗೆ ಆಗಿದೆ.

ನಮ್ಮ ವಾರ್ಡಿನ ಅಭಿವೃದ್ಧಿ ನಮ್ಮ ಕಡೆಯಿಂದ ವಸೂಲಿ ಮಾಡಿದ ಕರ ಹಾಗೂ ಟ್ಯಾಕ್ಸ್ ಕಟ್ಟಿದ ದುಡ್ಡಿನಲ್ಲಿ ರಸ್ತೆ,ಬೀದಿ,ಬೀದಿ ದೀಪ,ಗಟಾರು ಮಾಡಿ ಕೊಡಿ ಇಲ್ಲವೇ ನಮ್ಮ ದುಡ್ಡು ಎಲ್ಲಿ ಏನಾಯಿತು? ಎಂದು ಲೆಕ್ಕ ಕೊಡಿ ಇಲ್ಲವೇ ಮುಂದೆ ನಾವುಗಳು ಒಂದು ದಿನ ಬಿದಿಗಿಳಿದು ಪ್ರತಿಭಟನೆ ಮಾಡಬೇಕಾದೀತು ತಿಳಿಯಿರಿ. ಈ ಮೂಲಕ ಪತ್ರಿಕಾ ಪ್ರಕಟಣೆ ಸಂಬಂದಿಸಿದ ಅಧಿಕಾರಿಗಳಿಗೆ ಇಲ್ಲಿಯ ನಿವಾಸಿಗಳು ಸೇರಿ ಚರ್ಚಿಸಿ ಈ ತೀರ್ಮಾನ ತೆಗೆದು ಕೊಳ್ಳಲಾಗಿ ಮುಂದೊಂದು ದಿನ ನಗರಸಭೆಗೆ ಮುತ್ತಿಗೆ ಹಾಕುತ್ತೇವೆಂದು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷರಾದ ಜುನೈದ್ ಉಮಚಗಿ ಎಚ್ಚರಿಕೆ ನೀಡಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ