19.9 C
New York
Saturday, June 28, 2025

Buy now

spot_img

ಗದಗ : ಸಚಿವ ಡಾ.ಎಚ್.ಕೆ. ಪಾಟೀಲ ಅವರಿಂದ ಕ್ರೀಡಾಕೂಟಕ್ಕೆ ಚಾಲನೆ

ಕ್ರೀಡಾ ಸಾಧನೆಗೆ ಜಿಲ್ಲೆಯಲ್ಲಿ ಪೂರಕ ಸೌಕರ್ಯ ಲಭ್ಯ

ಗದಗ : ಆ.7: ಗದಗ ಜಿಲ್ಲೆಯಲ್ಲಿ ಕ್ರೀಡಾಬ್ಯಾಸ ಮಾಡಲು ಎಲ್ಲ ರೀತಿಯ ಸೌಲಭ್ಯಗಳನ್ನು ಸರ್ಕಾರ ಒದಗಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಕ್ರೀಡಾ ಸಾಧನೆ ಮಾಡಬೇಕು ಎಂದು ರಾಜ್ಯದ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.

ನಗರದ ಕೆ.ಎಚ್. ಪಾಟೀಲ್ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರದಂದು ಗದಗ ತಾಲೂಕ ಮಟ್ಟದ ‘ಬಿ’ ಗ್ರೂಪ್ ಪದವಿಪೂರ್ವ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಮಕ್ಕಳು ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು ಕ್ರೀಡಾಸ್ಪರ್ಧೆಯಿಂದ ಸಾಧನೆಯ ಶಿಖರ ತಲುಪಬೇಕು ಎಂದರು.

ಜಿಲ್ಲೆಯಲ್ಲಿ ಕ್ರೀಡಾ ಅಭ್ಯಾಸಕ್ಕಾಗಿ ಹಾಕಿ ಕ್ರೀಡಾಂಗಣ, ಈಜು ಕೋಳ, ಸುಸಜ್ಜಿತ ಕ್ರೀಡಾಂಗಣ ದಂತಹ ಸೌಕರ್ಯ ಒದಗಿಸಿದೆ. ಜೋತೆಗೆ ಮಕ್ಕಳಿಗೆ ಉತ್ತಮ ತರಬೇತುದಾರರನ್ನು ನೀಡಿ, ಸರ್ಕಾರ ಪ್ರೋತ್ಸಾಹಿಸುತ್ತಿದೆ. ಇವುಗಳನ್ನು ಮಕ್ಕಳು ಉಪಯೋಗಿಸಿಕೊಂಡು ಸಾಧನೆಮಾಡಲು ಮುಂದೆ ಬರಬೇಕು ಎಂದು ವಿಧ್ಯಾರ್ಥಿಗಳಿಗೆ ತಿಳಿಸಿದರು.

ಒಲಂಪಿಕ್ಸ್ ನಲ್ಲಿ ಈಗಾಗಲೇ ದೇಶದ ಕ್ರೀಡಾ ಪಟುಗಳು ಉತ್ಯಮ ಪ್ರದರ್ಶನ ತೋರಿ ಸಾಧನೆಗೈಯುತ್ತಿದ್ದಾರೆ. ಮನು ಬಾಕರ್, ಸರ್ವೋಜಿತ್ ಸಿಂಗ್, ಸ್ವನಿತ್ ಕುಸಲೆ ಅವರುಗಳು ಶೂಟಿಂಗ್ ನಲ್ಲಿ ಪ್ರಾಂಜ್ ಮೆಡಲ್ ಪಡೆದಿದ್ದಾರೆ. ನೀರಜ್ ಚೋಪ್ರಾ ಅವರು ಪೈನಲ್ ತಲುಪಿದ್ದು ಅವರು ವಿಜಯಶಾಲಿಯಾಗಲಿ ಎಂದು ಶುಭಕೋರಿದರು. ಅದೇ ತರಹ ಕುಸ್ತಿಯಲ್ಲಿ ನಿತೇಶ್ ಪೋಗಾಡ್, ಹಾಕಿಯಲ್ಲಿ ತಂಡವು ಮೂರನೆ ಸ್ಥಾನಕ್ಕೆ ಸೆಣಸಾಟ ನಡೆಸಿದೆ. ಇವರೆಲ್ಲರೂ ವಿಜಯಿಗಳಾಗಲಿ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಈಜುಕೊಳಗಳು ಕಳೆದ ಬೇಸಿಗೆಯಲ್ಲಿ ಮಕ್ಕಳು ಸೇರಿದಂತೆ ಎಲ್ಲರು ಬೆಸಿಗೆ ಜಳವನ್ನು ತಣಿಸಿವೆ. ಇವುಗಳಿಂದ 70 ಸಾವಿರ ಮೊತ್ತವು ಬಂದಿದೆ ಎಂದ ಅವರು ಮೂಲಭೂತ ಸೌಕರ್ಯಗಳನ್ನು ನಾವು ನೀಡಲು ಬದ್ಧ, ಅವುಗಳ ಸರಿಯಾದ ಸದ್ಭಳಕೆ ನಿಮ್ಮದು ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ ಅವರು ಹೇಳಿದರು.

ವಿಧಾನ ಪರಿಷತ್ ಶಾಸಕ ಎಸ್. ವಿ. ಸಂಕನೂರ ಅತಿಥಿಯಾಗಿ ಪಾಲ್ಗೊಂಡು ಕ್ರೀಡಾ ದ್ವಜಾರೋಹಣ ನೆರವೇರಿಸಿ ಮಾತನಾಡಿ, ಪದವಿ ಪೂರ್ವ ವಿಧ್ಯಾರ್ಥಿಗಳಿಗೆ ಓದಿನಲ್ಲಿ ಇರುವ ಆಸಕ್ತಿ ಕ್ರೀಡೆಯಲ್ಲಿ ಕಾಣುತ್ತಿಲ್ಲ. ಪಠ್ಯದಷ್ಟೆ ಪಠ್ಯೇತರ ಚಟುವಟಿಕೆಗಳಿಗೆ ಆಸಕ್ತಿ ನೀಡುವ ಮೂಲಕ ದೈಹಿಕ ಮಾನಸಿಕ ನೆಮ್ಮದಿ ನಿಮ್ಮದಾಗಿಸಿಕೊಳ್ಳಿ ಎಂದರು.

ವಿದ್ಯಾರ್ಥಿಗಳು ದೈಹಿಕ ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಿ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಕ್ರೀಡಾ ಪಟುಗಳ ಪ್ರೋತ್ಸಾಹಿಸುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕೇಲೊ ಇಂಡಿಯಾ ಕಾರ್ಯಕ್ರಮ ಜಾರಿಗೊಳಿಸಿದೆ. ಇದರಿಂದ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸರಿಯಾದ ತರಬೇತಿ ನೀಡಿ, ಕ್ರೀಡಾ ಸಾಧನೆಗೆ ಕಾರಣವಾಗಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ವಿಧ್ಯಾರ್ಥಿಗಳಿಗೆ ಕ್ರೀಡಾ ಕೂಟದ ಪ್ರತಿಜ್ಞಾವಿಧಿ ಭೋದಿಸಲಾಯಿತು.

ಕಾರ್ಯಕ್ರಮದಲ್ಲಿ ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಜಿ, ಗದಗ ಬೆಟಗೇರಿ ಮಾಜಿ ಅಧ್ಯಕ್ಷ ಬಿ.ಬಿ.ಅಸೂಟಿ, ರಾಜೇಶ್ ಕುಲಕರ್ಣಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಶಿಕ್ಷಕರು ಸೇರಿದಂತೆ ಗದಗ ತಾಲೂಕ ಮಟ್ಟದ ‘ಬಿ’ ಗ್ರೂಪ್ ಪದವಿಪೂರ್ವ ಕಾಲೇಜುಗಳ ವಿಧ್ಯಾರ್ಥಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news