ಗದಗ ೯: ಗದಗ ಶಹರ ಪೊಲೀಸ ಠಾಣೆ ಹಾಗೂ ರೋಟರಿ ಗದಗ ಸೆಂಟ್ರಲ್ ಆಶ್ರಯದಲ್ಲಿ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಗದಗ ಶಹರ ಹದ್ದಿನಲ್ಲಿ ಮನೆ ಕಳ್ಳತನವಾಗುತ್ತಿದ್ದು ಮನೆಗಳ್ಳತನವನ್ನು ತಡೆಗಟ್ಟಲು ನಗದು ಹಣ ಮತ್ತು ಆಭರಣವನ್ನು ಬ್ಯಾಂಕ್ ಲಾಕರ್ನಲ್ಲಿಡಿ ಮನೆ ಬಾಗಿಲುಗಳಿಗೆ ಇಂಟರ್ಲಾಕ್ ವ್ಯವಸ್ಥೆ ಅಳವಡಿಸಿ ಮನೆಗೆ ಸಿ ಸಿ ಕ್ಯಾಮರಾ ಮತ್ತು ಬರರ್ಗಲರ್ ಅಲಾರಾಮ್ ಅಳವಡಿಸಿ ನೀವು ಬೇರೆ ಊರಿಗೆ ಹೋದರೆ ಹೆಲ್ಪಲೈನ್ ಸಂಖ್ಯೆ ೯೪೮೦೦೨೧೧೦೦ಗೆ ಮಾಹಿತಿ ನೀಡಿ ಹಾಗೂ ವಾಹನಗಳಿಗೆ ಗುಣಮಟ್ಟದ ಲಾಕ್ ಅಳವಡಿಸಿ ವಾಹನಗಳಿಗೆ ಎಚ್ಚರಿಕೆ ಗಂಟೆ ಅಳವಡಿಸಿ ಸಾರ್ವಜನಿಕ ಸ್ಥಳದಲ್ಲಿ ದಿನವಿಡಿ ವಾಹನ ನಿಲ್ಲಿಸಬೇಡಿ, ಅಪರಿಚತ ವಾಹನ ಖರೀದಿಸಬೇಡಿ, ರಾತ್ರಿ ವೇಳೆ ವಾಹನವನ್ನು ಕಂಪೌAಡ ಹೊರಗಡೆ ನಿಲ್ಲಿಸಬೇಡಿ, ಹೆಚ್ಚು ಹೆಚ್ಚು ಸರಗಳ್ಳತನ ವಾಗುತ್ತಿದ್ದರಿಂದ ಒಬ್ಬಂಟಿಯಾಗಿ ಓಡಾಡುತ್ತಿದ್ದಾಗ ಆಭರಣವನ್ನು ಧರಿಸಬೇಡಿ ನಿರ್ಜನ ಪ್ರದೇಶದಲ್ಲಿ ವಾಕಿಂಗ್ ಹೋಗಬೇಡಿ, ಅಪರಿಚತರು ಕಂಡಲ್ಲಿ ವಾಹನ ಸಂಖ್ಯೆ ಮಾದರಿ ನಮೂದಿಸಿಕೊಳ್ಳಿ, ಸಂಶಯಾಸ್ಪದವರು ಕಂಡು ಬಂದರೆ ತಕ್ಷಣವೇ ಹತ್ತಿರದ ಪೊಲೀಸ ಠಾಣೆಗೆ ಹಾಗೂ ತುರ್ತು ವಾಹನ ಸಂಖ್ಯೆ ೧೧೨ ಗೆ ಕರೆ ಮಾಡಿ ಅಂತಾ ತಿಳಿಸಿದೆವು.
ಈ ಬೀಟ ಸಭೆಯಲ್ಲಿ ಪಿಎಸ್ಐ ರವರಾದ ಆರ್. ಆರ್ ಮುಂಡೆವಾಡಗಿ ಗದಗ ಶಹರ ಪೋಲಿಸ ಠಾಣೆ ಹಾಗೂ ಬೀಟ ಸಿಬ್ಬಂದಿಯವರಾದ ಮಂಜುನಾಥ ಸೂಡಿ ಸಿಪಿಸಿ-೧೦೪೧ ಮತ್ತು ಮಹಿಳಾ ಪೇದೆಯಾದ ರೇಶ್ಮಾ ಶಿತಸಂದಿ ಡಬ್ಲೂಪಿಸಿ-೧೧೯೦ ನೇದವರು ರೋಟರ ಗದಗ ಸೆಂಟ್ರಲ್ನ ಅಧ್ಯಕ್ಷರಾದ ವಿಜಯಕುಮಾರ ಹಿರೇಮಠ, ಶರಣಬಸಪ್ಪ ಗುಡಿಮನಿ, ಸದಾಶಿವಯ್ಯ ಮದರಿಮಠ, ತಾತನಗೌಡ ಪಾಟೀಲ, ಸುರೇಶ ಅಬ್ಬಿಗೇರಿ, ಚನ್ನವೀರ ಹುಣಸೀಕಟ್ಟಿ, ಮಂಜುನಾಥ ಬೇಲೇರಿ, ಎಸ್. ಪಿ. ಸಂಶಿಮಠ ಗದಗ ಚೇಂಬರ ಆಪ್ ಕಾಮರ್ಸ ಮಾಜಿ ಅಧ್ಯಕ್ಷರು, ಗುರು ತಡಸದ, ಬಸವರಾಜ ಅಂಗಡಿ, ಮಂಜುನಾಥ ಮ್ಯಾಗೇರಿ, ಮುತ್ತಣ್ಣ, ಅಂಬರೀಶ ಹಿರೇಮಠ, ಕುಂದಗೋಳ ಹಾಗೂ ಮುಂತಾದವರು ಉಪಸ್ಥಿತರಿರಿದ್ದರು.