ಗದಗ : ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಒಡ್ಡಹುಟ್ಟಿದ ತಂಗಿಯನ್ನು ಅಣ್ಣ ಕೊಲೆ ಮಾಡಿದ ಘಟನೆ ನಡೆದಿದೆ
ಆಸ್ತಿ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಮುಕ್ತಾಯವಾದ ಘಟನೆ ಮುಂಡರಗಿ ಅನ್ನದಾನೇಶ್ವರ ನಗರದಲ್ಲಿ ನಡೆದಿದೆ. ಒಡಹುಟ್ಟಿದ ತಂಗಿಗೆ ಹೊಟ್ಟೆಗೆ ಚಾಕುವಿನಿಂದ ಇರಿದು, ಉಸಿರು ಗಟ್ಟಿಸಿ ಕೊಲೆ ಮಾಡಿದ್ದಾನೆ .
ಕಾಳಮ್ಮ ಉರ್ಫ್ (ಖುರ್ಷಿದಾ) ರಂಗಪ್ಪ ಕ್ಯಾದಿಗೆಹಳ್ಳಿ (34) ಕೊಲೆಗೀಡಾದ ಮಹಿಳೆ
ಕಾಳಮ್ಮ ಹಿಂದೆ ಗ್ರಾಮದಲ್ಲಿ ಕಟಿಂಗ್ ಸಲೂನ್ ಇಟ್ಟುಕೊಂಡಿರುವ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದಳು.. ತದನಂತರ ಮೈಬೂಬ್ ಎಂಬಾತನನ್ನು ಎರಡನೇ ಮದುವೆಯಾಗಿದ್ದಳು.. ತನ್ನ ಹೆಸರನ್ನು ಖುರ್ಷಿದಾ ಎಂದು ಬದಲಾಯಿಸಿಕೊಂಡಿದ್ದಳು.. ಇದೀಗ ಆಕೆ ತನ್ನ ಅಣ್ಣನ 15 ಎಕರೆ ಜಮೀನಿನಲ್ಲಿ ಪಾಲು ಕೇಳಿದ್ದಳು..
ಈ ಹಿನ್ನೆಲೆಯಲ್ಲಿ ಇಂದು ತಂಗಿಯ ಮನೆಗೆ ಬಂದಿದ್ದ ಅಣ್ಣ ಕೇಸ್ ವಾಪಸ್ ಪಡೆಯುವಂತೆ ಹೇಳಿದ್ದಾನೆ.. ಆದ್ರೆ ಅದಕ್ಕೆ ಒಪ್ಪದ ಆಕೆ ಅಣ್ಣನ ಜೊತೆ ಮಾತಿಗೆ ಮಾತು.. ಬೆಳೆದಿದ್ದು ರೊಚ್ಚಿಗೆದ್ದ ಆರೋಪಿ, ಚಾಕು ಇರಿದು ಕೊಲೆ ಮಾಡಿದ್ದಾನೆ.. ನಂತರ ಆರೋಪಿ ಈಶ್ವರಪ್ಪ ರಂಗಪ್ಪ ಕ್ಯಾದಿಗೆಹಳ್ಳಿ ಮುಂಡರಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ..
ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಎಂ.ಬಿ. ಸಂಕದ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ ಈ ಘಟನೆ ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ .