14.4 C
New York
Friday, May 9, 2025

Buy now

spot_img

ಗದಗ : ತೋಂಟದಾರ್ಯ ಅಟೋ ಸ್ಟ್ಯಾಂಡ್ ಅನ್ನಸಂತರ್ಪಣೆ

ಗದಗ ೧೪: ಶ್ರೀ ತೋಂಟದಾರ್ಯ ಗಜಾನನೋತ್ಸವ ಸಮಿತಿ ವತಿಯಿಂದ ಶ್ರೀ ಗಣಪತಿ ಅಂಗವಾಗಿ ಸ್ಟೇಷನ್ ರೋಡ, ಮಠದ ಕೂಟ್ ಅಟೋ ಸ್ಟ್ಯಾಂಡ್ ನಲ್ಲಿ ಮಹಾಅನ್ನಸಂತರ್ಪಣೆ ಕಾರ್ಯಕ್ರಮವು ಶುಕ್ರವಾರ ಜರುಗಿತು. ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಶ್ರೀ ಪೂಜ್ಯ ಶ್ರೀ ಕಲ್ಲಯ್ಯಜ್ಜನವರಿಂದ ಶ್ರೀ ಗಣಪತಿಗೆ ಪೂಜೆ ಮಾಡುವುದರ ಮೂಲಕ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀ ಕಲ್ಲಯ್ಯಜ್ಜನವರಿಗೆ ಪ್ರೀತಿಯ ಪೂರ್ವಕವಾಗಿ ಗದಗ ಜಿಲ್ಲಾ ಅಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ವಿಜಯ ಕಲ್ಮನಿ, ಶ್ರೀ ತೋಂಟದಾರ್ಯ ಗಜಾನನೋತ್ಸವ ಸಮಿತಿಯ ಅಧ್ಯಕ್ಷರಾದ ಮಲ್ಲೇಶಪ್ಪ ಮುಂಡರಗಿ ಇವರು ಸನ್ಮಾನಿಸಿದರು.

ನಂತರ ಮಾತನಾಡಿದ ಪೂಜ್ಯ ಶ್ರೀಗಳು ಅನ್ನಸಂತರ್ಪಣೆ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ. ಅನ್ನದಾನಕ್ಕಿಂತ ಶ್ರೇಷ್ಠವಾದದ್ದು ಬೇರೆ ಯಾವುದು ಇಲ್ಲ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬೆಟಗೇರಿ ಬಡಾವಣೆ ರಾಜೀವಗಾಂಧಿ ಪೊಲೀಸ ಠಾಣೆಯ ಪಿಎಸ್‌ಐ ಸಾಹೇಬರಾದ ಶ್ರೀ ಮಾರುತಿ ಜೋಗದಂಡಕರ ಇವರು ಮನುಷ್ಯ ಬಂಗಾರಬೇಕು, ಬೆಳ್ಳಿ ಬೇಕು, ಹಣಬೇಕು, ಹೊಲಬೇಕು ಎಂದು ಆಸೆ ಪಡುತ್ತಾನೆ. ಸಾಕು ಎನ್ನುವುದಿಲ್ಲ. ಸಾಕು ಅಂತಾ ಹೇಳುವುದಾದರೆ ಅನ್ನ ಸಾಕು ಅಂತಾ ಹೇಳುತ್ತಾನೆ. ಅದಕ್ಕೆ ಅನ್ನದಾನ ಮಾಡುವುದರಿಂದ ಪಾಪಕರ್ಮಗಳೆಲ್ಲವೂ ತೊಲಗುವದು ಎಂದರು. ಇದೇ ಸಂದರ್ಭದಲ್ಲಿ ಇವರನ್ನು ಕೂಡಾ ಸಂಘದ ಅಧ್ಯಕ್ಷರು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯರಾದ ರಮೇಶ ಹರಿವಾಣ, ಮಂಜುನಾಥ ಅಗಸಿಮನಿ, ಲಕ್ಷö್ಮಣ ದೊಡ್ಡಮನಿ, ಗಂಗಾಧರ ನೆಳಗಾಂವಮಠ, ರಫೀಕ ಜಮಾಲಖಾನ, ಬಾಬಾಜಾನ ಬಳಗಾನೂರ, ರಫೀಕ ಲಕ್ಕುಂಡಿ, ವಿಠ್ಠಲ ಕಲ್ಮನಿ, ಮಲ್ಲೇಶ ಆದೋನಿ, ಮಂಜುನಾಥ ಮುಂಡರಗಿ, ಚಂದ್ರು ಮುಂಡರಗಿ, ಸಿದ್ದಣ್ಣ ದ್ಯಾವಣಸಿ, ಹನಮಂತ ಗೆಜ್ಜೇಳ್ಳಿ, ಮಹಾಂತೇಶ ಚಳ್ಳಮರದ, ಸಂಘದ ಸರ್ವ ಪದಾಧಿಕಾರಿಗಳು ಸ್ಟೇಷನ್ ರೋಡಿನ ಸಮಸ್ತ ಅಂಗಡಿಕಾರರು ಈ ಸಂದರ್ಭದಲ್ಲಿ ಇದ್ದರು ಕಾರ್ಯಕ್ರಮವನ್ನು ಮಲ್ಲೇಶಪ್ಪ ಮುಂಡರಗಿ ನಡೆಸಿಕೊಟ್ಟರು. ಪೂಜಾ ಕಾರ್ಯಕ್ರಮವನ್ನು ಶರಣಯ್ಯ ಒಂಟಗುಡಿಮಠ ನಡೆಸಿಕೊಟ್ಟರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ