ಗದಗ ೧೨: ಗದಗ-ಬೆಟಗೇರಿ ನಗರಸಭೆಯಲ್ಲಿ ಗಣೇಶೋತ್ಸವ ಅಂಗವಾಗಿ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಕಲ್ಲಯ್ಯಜ್ಜನವರ ಸಾನಿಧ್ಯದಲ್ಲಿ ಶ್ರೀ ಗಣೇಶನಿಗೆ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮಾನ್ಯ ಅಪರ ಜಿಲ್ಲಾಧಿಕಾರಿಗಳು, ಮಾನ್ಯ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ ಗದಗ, ಮಾನ್ಯ ಪೌರಾಯುಕ್ತರು ಗದಗ-ಬೆಟಗೇರಿ ನಗರಸಭೆ, ನಗರಸಭೆಯ ಮಾಜಿ ಅಧ್ಯಕ್ಷರು ಮತ್ತು ಹಾಲಿ ಸದಸ್ಯರು, ನಗರಸಭೆ ಕಚೇರಿ ವ್ಯವಸ್ಥಾಪಕರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನಗರಸಭೆ, ಲೆಖಾಧೀಕ್ಷಕರು ನಗರಸಭೆ ಗದಗ-ಬೆಟಗೇರಿ, ಕಂದಾಯ ಅಧಿಕಾರಿಗಳು ನಗರಸಭೆ ಗದಗ-ಬೆಟಗೇರಿ, ಟಿ. ಎಚ್. ದ್ಯಾವನೂರ ಲೆಕ್ಕಾಧೀಕ್ಷಕರು, ಪಿ. ಎಫ್. ಶೇರಖಾನೆ ಕಛೇರಿ ವ್ಯವಸ್ಥಾಪಕರು, ದ್ವಿ.ದ.ಸ. ರುಗಳಾದ ಎಸ್. ಎಂ. ಗುಡಿ ದ್ವಿ.ದ.ಸ., ಎಲ್. ಜಿ. ಗಾಡಗೋಳಿ, ಎನ್.ಎಂ.ಗೋರಣ್ಣವರ, ಎಸ್. ಎ. ಅಗಸಿಮನಿ, ಆರ್. ಎಂ. ನಾಗಲೀಕರ ಸೇರಿದಂತೆ ನಗರಸಭೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.