ಮುಂಡರಗಿ: ತಾಲೂಕಾ ಗ್ರಾಪಂ ವ್ಯಾಪ್ತಿಗಳ ಅನಕ್ಷರಸ್ಥ ಗ್ರಾಮ ಪಂಚಾಯತ ಸದಸ್ಯರಿಗೆ ಇಚ್ ಒನ್ ಟೀಚ್ ಒನ್ ಕಾರ್ಯಕ್ರಮದಡಿ ಸಾಕ್ಷರರನ್ನಾಗಿಸಲು ಗ್ರಂಥಾಲಯ ಮೇಲ್ವಿಚಾರಕರಿಗೆ ಹಾಗೂ ಮೇಲ್ವಿಚಾರಕರಿಗೆ ಮೂರು ದಿನಗಳ ತರಬೇತಿ ಶಿಬಿರಕ್ಕೆ ಗುರುವಾರ ಮುಂಡರಗಿ ತಾಪಂ ಸಭಾಂಗಣದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ವಿಶ್ವನಾಥ ಹೊಸಮನಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಂಸ್ಥೆ ಹಮ್ಮಿಕೊಂಡ ಸಾಕ್ಷರ ಸನ್ಮಾನ ಕಾರ್ಯಕ್ರಮ ಮಹತ್ತರ ಕಾರ್ಯಕ್ರಮವಾಗಿದೆ. ಇದರಿಂದ ಅವರು ಅನ್ಯಾಯದ ವಿರುದ್ಧ ಧ್ವನಿ ಎತ್ತಿ ತಾರತಮ್ಯ ಹಾಗೂ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಲು ಸಹಕಾರಿ ಎಂದು ಹೇಳಿದರು.
ಆ ನಿಟ್ಟಿನಲ್ಲಿ ಮೂರು ದಿನ ತರಬೇತಿ ಪಡೆದ ತಾಲೂಕಿನ ಗ್ರಂಥಾಲಯ ಮೇಲ್ವಿಚಾರಕರು ಅನಕ್ಷರಸ್ಥ ಗ್ರಾಪಂ ಸದಸ್ಯರನ್ನು ತರಬೇತಿ ನೀಡಿ ಸಾಕ್ಷರರನ್ನಾಗಿಸಿದರೆ ಇದು ಗ್ರಾಮಗಳ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಿದಂತೆ ಇದು ಸಾಮಾಜಿಕ ಜವಾಬ್ದಾರಿಯು ಹೌದು ಎಂದು ಅಭಿಪ್ರಾಯಪಟ್ಟರು.
ಮುಖ್ಯ ತರಬೇತಿದಾರರಾಗಿ ಶಿಕ್ಷಣ ಇಲಾಖೆ ಕೆ.ಬಿ ತಂಬ್ರಳ್ಳಿ ಹಾಗೂ ವಿ ಎಚ್ ಹೊಳಿಯಮ್ಮನವರ ಅವರು ಮೂರು ದಿನಗಳ ತರಬೇತಿ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿ ಮಂಜುನಾಥ ಮುಧೋಳ, ವಿಷಯ ನಿರ್ವಾಹಕ ಶಾಬುದ್ಧೀನ ನಧಾಪ, ತಾಪಂ ಸಿಬ್ಬಂದಿ ಇದ್ದರು.