14.4 C
New York
Friday, May 9, 2025

Buy now

spot_img

ಗದಗ : ರೈತರ ಜಮೀನಿನಲ್ಲಿ ವಿದ್ಯುತ ಗೋಪುರ ನಿರ್ಮಾಣ :  ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ 

ಗದಗ ೧೬: ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ೨೫೦೦ ಎಮ್. ವಿ. ಎ ೪೦೦/೨೨೦ ಕೆ. ವಿ. ವಿದ್ಯುತ್ ಉಪಕೇಂದ್ರವನ್ನು ನಿರ್ಮಾಣ ಮತ್ತು ಅದಕ್ಕೆ ಸಂಬAಧಿಸಿದ ೪೦೦ ಕೆ. ವಿ. ಮತ್ತು ಕೆ. ವ್ಹಿ. ವಿದ್ಯುತ್ ಪ್ರಸರಣ ಮಾರ್ಗಗಳ ನಿರ್ಮಾಣ ಮಾಡುವ ಕಾಮಗಾರಿಯ ವಿಚಾರದಲ್ಲಿ ಭೂ ಪರಿಹಾರ ಬೆಲೆ ನಿಗದಿಪಡಿಸುವಂತೆ ಡಂಬಳ ಗ್ರಾಮದ ರೈತರು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ರೈತರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ರೈತರ ಜಮೀನಿನಲ್ಲಿ ಮಾಡುತ್ತಿರುವ ವಿದ್ಯುತ್ ಗೋಪುರ ನಿರ್ಮಣ ಮಾಡುತ್ತಿದ್ದು, ರೈತರಿಗೆ ಪರಿಹಾರವನ್ನು ಅವೈಜ್ಞಾನಿಕ ಪರಿಹಾರವನ್ನು ಜಿಲ್ಲಾಧಿಕಾರಿಗಳು ರೈತರಿಗೆ ಆದೇಶಿಸಿದ್ದು ಜಿಲ್ಲಾಧಿಕಾರಿಗಳ ಆದೇಶ ಪ್ರಕಾರ ಪ್ರತಿಚದರ ಮೀಟರಿಗೆ ೨೫೦೦ ರೂಪಾಯಿ ಮತ್ತು ತಂತಿಗೆ ೨೦ ರೂ ನಂತೆ ಬೆಳೆಹಾನಿ ಮತ್ತು ಇತರ ಹಾನಿ ಆದಲ್ಲಿ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದು ಈ ಪರಿಹಾರ ನಮಗೆ ಸಾಲುವುದಿಲ್ಲ. ಕಾರಣ ಮಾನ್ಯರು ಪುನಃ ಪರಿಶೀಲನೆ ಮಾಡಿ ನಮಗೆ ಪ್ರತಿ ಚದರ ಮೀಟರಗೆ ೩೫೦೦ ರೂ ರಂತೆ ಮತ್ತು ತಂತಿ ೫೦ ರೂ ಪ್ರತಿ ಚದರ ಮೀಟರಿಗೆ ಮತ್ತು ಬೆಳೆಹಾನಿ ಪರಿಹಾರ ಹೆಚ್ಚಿಸಿ ಪರಿಹಾರ ನೀಡಬೇಕು. ಸದರಿ ವಿದ್ಯುತ ಗೋಪುರ ನಿರ್ಮಾಣಕ್ಕೆ ಯಾವುದೇ ಅಡ್ಡಿ ಪಡಿಸುವುದಿಲ್ಲ ನಮಗೆ ಸಕಾಲಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ ಹಾಯ್ದು ಹೋಗುವ ತಂತಿ ಕೆಳಗೆ ನಾವು ಎತ್ತರದ ಗಿಡ ಮರಗಳಿವೆ, ರೈತರ ಸಾಗುವಳಿಕೆ, ಕೊಳವೆ ಬಾವಿ, ದನಕರ ಮನುಷ್ಯನಿಗೆ ಅಪಾಯವಿದ್ದು, ಬೇರೆ ಇತರೆ ಕಾಮಗಾರಿ ಮಾಡುವಂತಿಲ್ಲ. ಮುಂದೆ ನಾವು ರೈತರು ಜಮೀನು ಮಾರಾಟ ಮಾಡಿದರೆ ಯಾರು ತೆಗೆದುಕೊಳ್ಳುವುದಿಲ್ಲ. ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಪುನಃ ಪರಿಶೀಲನೆ ಮಾಡಿ ಹೆಚ್ಚಿನ ಪರಿಹಾರಕ್ಕೆ ಆದೇಶ ಮಾಡಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ರೈತರಾದ ಜಗದೀಶ ಹಳ್ಳಿ, ಚನ್ನಬಸಪ್ಪ ಪಟ್ಟಣಶೆಟ್ಟಿ, ಶಂಕ್ರಯ್ಯ ಬಾಳಿಹಳ್ಳಿಮಠ, ಕುಷಪ್ಪ ಕದಡಿ, ಮುರಳೀಧರ ಹೊಸಮನಿ, ಮುಳ್ಳಪ್ಪ ಹಳ್ಳಾಕಾರ, ದೇವಪ್ಪ ಕೆರಳ್ಳಿ, ಗವಿಸಿದ್ದಪ್ಪ ಪಾರಪ್ಪನವರ, ಗುರಪ್ಪ ಹಟ್ಟಿ, ನಾಗಮ್ಮ ಆದಮ್ಮನವರ, ಅರ್ಜುನಪ್ಪ ಹೊಂಬಳ, ಆರ್. ಅರ್. ಕೊರ್ಲಗಟ್ಟಿ, ಜೆ. ಎಚ್. ಸಣ್ಣಪ್ಯಾಟಿ, ಹುಯಿಲಗೋಳ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ