ಗದಗ ೧೫: ಕೆನರಾ ಬ್ಯಾಂಕನ ಡಾ. ಬಿ. ಆರ್. ಅಂಬೇಡ್ಕರ ವಿದ್ಯಾಜ್ಯೋತಿ ಸ್ಕಾಲರ್ಶಿಪ್ ಯೋಜನೆಯ ಅಡಿಯಲ್ಲಿ ಗದಗ ಜಿಲ್ಲೆಯಲ್ಲಿ ಯೋಜನೆಯ ಅನುಷ್ಠಾನ ಕಾರ್ಯಕ್ರಮವನ್ನು ಗದಗ ನಗರದ ಲಾಯನ್ಸ್ ಕ್ಲಬ್ನಲ್ಲಿ ದಿನಾಂಕ ೧೪-೦೮-೨೦೨೪ ರಂದು ೦೧-೩೦ ಘಂಟೆಗೆ ಪ್ರಾರಂಭಿಸಲಾಯಿತು.
ಕಾರ್ಯಕ್ರಮದ ಮುಖ್ಯ ಉದ್ದೇಶ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೆಣ್ಣು ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹಿಸಿ ಶೈಕ್ಷಣಿಕವಾಗಿ ಮುಖ್ಯವಾಹಿನಿಗೆ ತರುವಂತಹ ಮಹತ್ತರ ಯೋಜನೆಯಾಗಿ ೫ ನೇ ತರಗತಿಯಿಂದ ೧೦ ನೇ ತರಗತಿಯವರೆಗೆ ಆಯಾ ತರಗತಿಗೆ ಹೆಚ್ಚಿನ ಅಂಕಪಡೆದ ಸಮುದಾಯದ ಹೆಣ್ಣು ಮಕ್ಕಳಿಗೆ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮ ಇದಾಗಿದ್ದು ಗದಗ ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ಈ ಕಾರ್ಯಕ್ರಮವನ್ನು ಇಂದು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ. ಎಚ್. ಕೆ. ಪಾಟೀಲ ಕಾನೂನು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಕೆನರಾ ಬ್ಯಾಂಕಿನ ಮಹತ್ತರ ಹಾಗೂ ಸಮಾಜಮುಖಿ ಕಾರ್ಯಕ್ರಮ ಇದಾಗಿದ್ದು, ಪರಿಶಿಷ್ಟ ಜಾತಿ, ಪಂಗಡ ಮುಖ್ಯವಾಗಿ ಮಹಿಳೆಯರು ಶಿಕ್ಷಣದಿಂದ ವಂಚಿತರಾಗುತ್ತಿದ್ದು ಇಂತಹ ಯೋಜನೆಗಳಿಂದ ಶಿಕ್ಷಣದ ಗುಣಮಟ್ಟ ಸುಧಾರಿಸಲು ಅನುಕೂಲವಾಗುವುದು ಮತ್ತು ಇಂತಹ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮುಂದುವರೆಸಬೇಕೆAದು ತಿಳಿಸಿದರು.
ಕೆನರಾ ಬ್ಯಾಂಕನ ಗದಗ ಶಾಕೆಯ ಮುಖ್ಯ ಪ್ರಬಂಧಕರಾದ ಅಯ್ಯಾಸ್ವಾಮಿ ಎನ್. ಮಾತನಾಡಿ ಕೆನರಾ ಬ್ಯಾಂಕನ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಕೆನರಾ ಡಾ. ಬಿ. ಆರ್. ಅಂಬೇಡ್ಕರ ವಿದ್ಯಾಜ್ಯೋತಿ ಸ್ಕಾಲರ್ಶಿಪ್ ಯೋಜನೆಯ ಒಂದಾಗಿದ್ದು ಈ ಯೋಜನೆಯ ಅನುಷ್ಠಾನಕ್ಕಾಗಿ ಕೆನರಾ ಬ್ಯಾಂಕ್ ರಾಷ್ಟçವ್ಯಾಪಿ ೯೭೦೦ ಶಾಖೆಯಿಂದ ಒಟ್ಟು ೪೪೭೪೨ ವಿದ್ಯಾರ್ಥಿನಿಯರಿಗೆ ೧೮ ಕೋಟಿ ರೂಪಾಯಿಗಳಷ್ಟು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಹೆಣ್ಣುಮಕ್ಕಳ ಶೈಕ್ಷಣಿಕವಾಗಿ ಬಹಳಷ್ಟು ಪ್ರೋತ್ಸಾಹ ಸಿಗುವುದೆಂದು ತಿಳಿಸದಿರು.
ಈ ಕಾರ್ಯಕ್ರಮದಲ್ಲಿ ವಾಸಣ್ಣ ಕುರಡಗಿ ಮಾಜಿ ಗದಗ ಜಿಲ್ಲಾ ಪಂಚಾಯತ ಅಧ್ಯಕ್ಷರು, ಸಂದೀಪ ಅಗರವಾಲ ಸಹಾಯಕ ಪ್ರಬಂಧಕರು ವಲಯ ಕಚೇರಿ ಹುಬ್ಬಳ್ಳಿ, ಸುನೀಲ ಕುಮಾರ ವಿಭಾಗೀಯ ಪ್ರಬಂಧಕರು ಬಾಗಲಕೋಟೆ, ಆಂಜನೇಯ ಕಟಗಿ ಪ್ರಥಮ ದರ್ಜೆ ಗುತ್ತಿಗೆದಾರರು, ಗದಗ ನಗರದ ವಿವಿಧ ಶಾಲೆಯ ಮಕ್ಕಳು, ಶಿಕ್ಷಕರು, ಕೆನರಾ ಬ್ಯಾಂಕ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮ ನಾಗರಾಜ ಹೆಚ್. ನಿರೂಪಿಸಿದರು. ಬಾಳಾಜಿರಾವ ಕುಲಕರ್ಣಿ ವಂದಿಸಿದರು.