Wednesday, March 26, 2025
Google search engine
Homeಉದ್ಯೋಗಗದಗ : ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ

ಗದಗ : ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ

ಗದಗ  ಫೆಬ್ರುವರಿ 17: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಬೆಂಗಳೂರು ಇವರ ಪ್ರಾಯೋಜಿಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಬಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರು ಸಂಕಲ್ಪ ಯೋಜನೆಯಡಿ ಗದಗ ಜಿಲ್ಲೆಯ ರಾಷ್ಟಿçÃಯ ಜೀವನೋಪಾಯಡಿ ಆಯ್ಕೆಯಾದ ವಿವಿಧ ನಗರ ಸ್ಥಳಿಯ ಸಂಸ್ಥೆ ವ್ಯಾಪ್ತಿಯ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರಿಗೆ 5 ದಿನದ ವಸತಿಯುತ ಉದ್ಯಮಶೀಲತಾ ತರಬೇತಿಯ ಸಮಾರೋಪ ಸಮಾರಂಭವನ್ನು ಇತ್ತೀಚೆಗೆ ಹುಲಕೋಟಿಯ ಕೃûಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಪ್ರಮಾಣ ಪತ್ರ ವಿತರಕರಾಗಿ ಆಗಮಿಸಿದ, ಸಿಡಾಕ್ ಧಾರವಾಡದ ನಿರ್ದೇಶಕರಾದ ಬಸವರಾಜ. ಗೋಟುರ ಭಾಗವಹಿಸಿ, ಈಗಾಗಲೆ ತಾವೆಲ್ಲ ಸ್ವ ಸಹಾಯ ಸಂಘದ ನೇರವಿನಿಂದ ಚಟುವಟಿಕೆಗಳನ್ನು ಮಾಡುತ್ತಿರುತ್ತಿರಿ, ಈ ತರಬೇತಿಯಿಂದ ಅವುಗಳನ್ನು ವಾಣಿಜ್ಯ ಚಟುವಟಿಕೆಗಳನ್ನಾಗಿಸಿ, ಉದ್ಯಮಿಯಾಗಬೇಕೆಂದು ಹೇಳಿದರು.

 ಮುಖ್ಯ ಅತಿಥಿಗಳಾಗಿ ಭಾಗವಹಿಸಿದ, ಕೃಷಿ ವಿಜ್ಞಾನ ಕೇಂದ್ರದ ಅಡ್ವೆöÊಜರ್, ಡಾ. ಏಲ್. ಜಿ. ಹಿರೇಗೌಡರ ಅವರು ಮಾತನಾಡುತ್ತ, ಸಿಡಾಕ್ ಸಂಸ್ಥೆ ಮೊದಲಿನಿಂದಲೂ ಒಳ್ಳೆಯ ತರಬೇತಿ ನಿಡುತ್ತಾ ಬರುತ್ತಿದೆ. ಮುಂದೆ ನಮ್ಮ ಕೆ.ವಿ.ಕೆ ಸಂಸ್ಥೆಯಿAದ ಲೆಬಲಿಂಗ್, ಪ್ಯಾಕೆಜಿಂಗ್, ಮಾರುಕಟ್ಟೆ ಹೀಗೆ ಇನ್ನಿತರ ಸಹಾಯ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ, ಸತತ ಪ್ರಯತ್ನದಿಂದ ತಾವೆಲ್ಲರೂ ಉದ್ಯಮಿಗಳಾಗಿ ಎಂದು ತಿಳಿಸಿದರು.

ಅತಿಥಿಗಳಾಗಿ ಭಾಗವಹಿಸಿದ, ಡೇ-ನಲ್ಮ್ ಜಿಲ್ಲಾ ಅಭಿಯಾನ ವ್ಯವಸ್ಥಾಪಕರಾದ ಅಮರೇಶ. ಆರ್. ಅವರು ಯಶಸ್ವಿ ತರಬೇತಿ ಮಾಡಿದ್ದಕ್ಕಾಗಿ, ಸಿಡಾಕ್ ಸಂಸ್ಥೆಯನ್ನು ಅಭಿನಂಧಿಸಿದರು. ಈ ತರಬೇತಿ ಮುಗಿದ ನಂತರ ಒಂದು ಒಳ್ಳೆಯ ಉದ್ಯಮವನ್ನು ಆಯ್ಕೆ ಮಾಡಿ, ಉದ್ಯಮವನ್ನು ಪ್ರಾರಂಭಿಸಬೇಕೆAದು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಡಾಕ್, ಧಾರವಾಡದ ಜಂಟಿ ನಿರ್ದೇಶಕರಾದ ಚಂದ್ರಶೇಖರ. ಎಚ್. ಅಂಗಡಿಯವರು ಮಾತನಾಡಿ ಈ ತರಬೇತಿ ಯಶಸ್ವಿಯಾಗಲು ಸಂಘದ ಮಹಿಳಾ ಸದಸ್ಯರ ಆಸಕ್ತಿ ಹಾಗೂ ಜಿಲ್ಲೆಯ ಸಿ.ಆರ್.ಪಿ. ಅವರ ಶ್ರಮ ಇದೆ, ಜೊತೆಗೆ ಕೆ.ವಿ.ಕೆ ಯಲ್ಲಿ ಕಲಿಕಾ ವಾತವರಣ ಇದೆ. ತಾವೆಲ್ಲರೂ ಈ ತರಬೇತಿಯಿಂದ ಮುಂದೆ ಮಹಿಳಾ ಉದ್ಯಮಿಗಳಾಗಿ ಉದ್ಯೋಗ ನೀಡಬೇಕೆಂದು ಹೇಳಿದರು.

ತರಬೇತಿ ಕೊನೆಯ ದಿನದ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರೂಪಾ. ಶಿರಿಯಪ್ಪಗೌಡರ ಹಾಗೂ ಪ್ರವೀಣ. ಅಂಗಡಿ ಅವರು ಬೋಧಿಸಿದರು.

ಕಾರ್ಯಕ್ರಮದಲ್ಲಿ ಮಂಜುನಾಥ ಮುಳಗುಂದ, ತರಬೇತುದಾರರು ಸಿಡಾಕ್, ನಿರೂಪಿಸಿದರು. ವಿಜಯಲಕ್ಷಿ÷್ಮÃ. ನೆಲ್ಲೂರ ತರಬೇತುದಾರರು, ಸಿಡಾಕ್ ಇವರು ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ