ಗದಗ : ಪೆ : 12 : ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರ ಗ್ರಾಮದ ಬಳಿಯ ತುಂಗಭದ್ರಾ ನದಿ ಒಡಲು ಬಗೆದು ಅಕ್ರಮ ಮರಳು ಲೂಟಿಕೋರರಿಗೆ ಬೆಳ್ಳಂಬೆಳಗ್ಗೆ ಜಿಲ್ಲಾಧಿಕಾರಿ ಶಾಕ್ ನೀಡಿದ್ದಾರೆ.
ಹೀಗಾಗಿ ದೂರು ಆಧರಿಸಿ ಸ್ವತಃ ಬೆಳ್ಳಂ ಬೆಳಿಗ್ಗೆ ಜಾವ 4-30 ರ ಸುಮಾರಿಗೆ ಖಾಸಗಿ ವಾಹನದಲ್ಲಿ ತೆರಳಿದ ಡಿಸಿ ಹಾಗೂ ಎಸಿ ಸ್ವತಃ ನದಿ ನೀರಿಗೆ ಇಳಿದು ಅಕ್ರಮ ಮರಳು ಲೂಟಿಕೋರರಿಗೆ ಚಳಿ ಬೀಡಿಸಿದ್ದಾರೆ.
ಈ ವೇಳೆ, ಸುಮಾರು 20 ಕ್ಕೂ ಹೆಚ್ಚು ಟ್ರ್ಯಾಕ್ಟರ್ ಗಳಲ್ಲಿ ಮರಳು ಲೂಟಿಕೋರರು ನದಿ ಮಧ್ಯದಲ್ಲಿ ಅಕ್ರಮವಾಗಿ ಮರಳು ತುಂಬುತ್ತಿದ್ದರು. ಅಧಿಕಾರಿಗಳನ್ನ ನೋಡಿದ ತಕ್ಷಣ ಎಲ್ಲರೂ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಬೆನ್ನು ಹತ್ತಿದ ಅಧಿಕಾರಿಗಳಿಗೆ ಎರಡು ಟ್ರ್ಯಾಕ್ಟರ್ ಹಾಗೂ ಇಬ್ಬರು ಚಾಲಕರು, ಮೊಬೈಲ್ ಸೇರಿದಂತೆ ಹಲವು ಕಡೆಗಳಲ್ಲಿ ಸಂಗ್ರಹಿಸಿಟ್ಟಿದ್ದ 40 ಕ್ಕೂ ಹೆಚ್ಚು ಟಿಪ್ಪರ್ ನಷ್ಟು ಅಕ್ರಮ ಮರಳನ್ನ ವಶಪಡಿಸಿಕೊಂಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಠಿಕಾಣಿ ಹೂಡಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ. ಕಂದಾಯ ಇಲಾಖೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.