ಗದಗ ೧೪: ಶ್ರೀ ತೋಂಟದಾರ್ಯ ಗಜಾನನೋತ್ಸವ ಸಮಿತಿ ವತಿಯಿಂದ ಶ್ರೀ ಗಣಪತಿ ಅಂಗವಾಗಿ ಸ್ಟೇಷನ್ ರೋಡ, ಮಠದ ಕೂಟ್ ಅಟೋ ಸ್ಟ್ಯಾಂಡ್ ನಲ್ಲಿ ಮಹಾಅನ್ನಸಂತರ್ಪಣೆ ಕಾರ್ಯಕ್ರಮವು ಶುಕ್ರವಾರ ಜರುಗಿತು. ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಶ್ರೀ ಪೂಜ್ಯ ಶ್ರೀ ಕಲ್ಲಯ್ಯಜ್ಜನವರಿಂದ ಶ್ರೀ ಗಣಪತಿಗೆ ಪೂಜೆ ಮಾಡುವುದರ ಮೂಲಕ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ಶ್ರೀ ಕಲ್ಲಯ್ಯಜ್ಜನವರಿಗೆ ಪ್ರೀತಿಯ ಪೂರ್ವಕವಾಗಿ ಗದಗ ಜಿಲ್ಲಾ ಅಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ವಿಜಯ ಕಲ್ಮನಿ, ಶ್ರೀ ತೋಂಟದಾರ್ಯ ಗಜಾನನೋತ್ಸವ ಸಮಿತಿಯ ಅಧ್ಯಕ್ಷರಾದ ಮಲ್ಲೇಶಪ್ಪ ಮುಂಡರಗಿ ಇವರು ಸನ್ಮಾನಿಸಿದರು.
ನಂತರ ಮಾತನಾಡಿದ ಪೂಜ್ಯ ಶ್ರೀಗಳು ಅನ್ನಸಂತರ್ಪಣೆ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ. ಅನ್ನದಾನಕ್ಕಿಂತ ಶ್ರೇಷ್ಠವಾದದ್ದು ಬೇರೆ ಯಾವುದು ಇಲ್ಲ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬೆಟಗೇರಿ ಬಡಾವಣೆ ರಾಜೀವಗಾಂಧಿ ಪೊಲೀಸ ಠಾಣೆಯ ಪಿಎಸ್ಐ ಸಾಹೇಬರಾದ ಶ್ರೀ ಮಾರುತಿ ಜೋಗದಂಡಕರ ಇವರು ಮನುಷ್ಯ ಬಂಗಾರಬೇಕು, ಬೆಳ್ಳಿ ಬೇಕು, ಹಣಬೇಕು, ಹೊಲಬೇಕು ಎಂದು ಆಸೆ ಪಡುತ್ತಾನೆ. ಸಾಕು ಎನ್ನುವುದಿಲ್ಲ. ಸಾಕು ಅಂತಾ ಹೇಳುವುದಾದರೆ ಅನ್ನ ಸಾಕು ಅಂತಾ ಹೇಳುತ್ತಾನೆ. ಅದಕ್ಕೆ ಅನ್ನದಾನ ಮಾಡುವುದರಿಂದ ಪಾಪಕರ್ಮಗಳೆಲ್ಲವೂ ತೊಲಗುವದು ಎಂದರು. ಇದೇ ಸಂದರ್ಭದಲ್ಲಿ ಇವರನ್ನು ಕೂಡಾ ಸಂಘದ ಅಧ್ಯಕ್ಷರು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯರಾದ ರಮೇಶ ಹರಿವಾಣ, ಮಂಜುನಾಥ ಅಗಸಿಮನಿ, ಲಕ್ಷö್ಮಣ ದೊಡ್ಡಮನಿ, ಗಂಗಾಧರ ನೆಳಗಾಂವಮಠ, ರಫೀಕ ಜಮಾಲಖಾನ, ಬಾಬಾಜಾನ ಬಳಗಾನೂರ, ರಫೀಕ ಲಕ್ಕುಂಡಿ, ವಿಠ್ಠಲ ಕಲ್ಮನಿ, ಮಲ್ಲೇಶ ಆದೋನಿ, ಮಂಜುನಾಥ ಮುಂಡರಗಿ, ಚಂದ್ರು ಮುಂಡರಗಿ, ಸಿದ್ದಣ್ಣ ದ್ಯಾವಣಸಿ, ಹನಮಂತ ಗೆಜ್ಜೇಳ್ಳಿ, ಮಹಾಂತೇಶ ಚಳ್ಳಮರದ, ಸಂಘದ ಸರ್ವ ಪದಾಧಿಕಾರಿಗಳು ಸ್ಟೇಷನ್ ರೋಡಿನ ಸಮಸ್ತ ಅಂಗಡಿಕಾರರು ಈ ಸಂದರ್ಭದಲ್ಲಿ ಇದ್ದರು ಕಾರ್ಯಕ್ರಮವನ್ನು ಮಲ್ಲೇಶಪ್ಪ ಮುಂಡರಗಿ ನಡೆಸಿಕೊಟ್ಟರು. ಪೂಜಾ ಕಾರ್ಯಕ್ರಮವನ್ನು ಶರಣಯ್ಯ ಒಂಟಗುಡಿಮಠ ನಡೆಸಿಕೊಟ್ಟರು.