Thursday, September 19, 2024
Google search engine
Homeಆರೋಗ್ಯಗದಗ : ತೋಂಟದಾರ್ಯ ಅಟೋ ಸ್ಟ್ಯಾಂಡ್ ಅನ್ನಸಂತರ್ಪಣೆ

ಗದಗ : ತೋಂಟದಾರ್ಯ ಅಟೋ ಸ್ಟ್ಯಾಂಡ್ ಅನ್ನಸಂತರ್ಪಣೆ

ಗದಗ ೧೪: ಶ್ರೀ ತೋಂಟದಾರ್ಯ ಗಜಾನನೋತ್ಸವ ಸಮಿತಿ ವತಿಯಿಂದ ಶ್ರೀ ಗಣಪತಿ ಅಂಗವಾಗಿ ಸ್ಟೇಷನ್ ರೋಡ, ಮಠದ ಕೂಟ್ ಅಟೋ ಸ್ಟ್ಯಾಂಡ್ ನಲ್ಲಿ ಮಹಾಅನ್ನಸಂತರ್ಪಣೆ ಕಾರ್ಯಕ್ರಮವು ಶುಕ್ರವಾರ ಜರುಗಿತು. ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಶ್ರೀ ಪೂಜ್ಯ ಶ್ರೀ ಕಲ್ಲಯ್ಯಜ್ಜನವರಿಂದ ಶ್ರೀ ಗಣಪತಿಗೆ ಪೂಜೆ ಮಾಡುವುದರ ಮೂಲಕ ಅನ್ನಸಂತರ್ಪಣೆಗೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಶ್ರೀ ಕಲ್ಲಯ್ಯಜ್ಜನವರಿಗೆ ಪ್ರೀತಿಯ ಪೂರ್ವಕವಾಗಿ ಗದಗ ಜಿಲ್ಲಾ ಅಟೋ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾದ ವಿಜಯ ಕಲ್ಮನಿ, ಶ್ರೀ ತೋಂಟದಾರ್ಯ ಗಜಾನನೋತ್ಸವ ಸಮಿತಿಯ ಅಧ್ಯಕ್ಷರಾದ ಮಲ್ಲೇಶಪ್ಪ ಮುಂಡರಗಿ ಇವರು ಸನ್ಮಾನಿಸಿದರು.

ನಂತರ ಮಾತನಾಡಿದ ಪೂಜ್ಯ ಶ್ರೀಗಳು ಅನ್ನಸಂತರ್ಪಣೆ ಮಾಡುವುದರಿಂದ ಪುಣ್ಯಪ್ರಾಪ್ತಿಯಾಗುತ್ತದೆ. ಅನ್ನದಾನಕ್ಕಿಂತ ಶ್ರೇಷ್ಠವಾದದ್ದು ಬೇರೆ ಯಾವುದು ಇಲ್ಲ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಬೆಟಗೇರಿ ಬಡಾವಣೆ ರಾಜೀವಗಾಂಧಿ ಪೊಲೀಸ ಠಾಣೆಯ ಪಿಎಸ್‌ಐ ಸಾಹೇಬರಾದ ಶ್ರೀ ಮಾರುತಿ ಜೋಗದಂಡಕರ ಇವರು ಮನುಷ್ಯ ಬಂಗಾರಬೇಕು, ಬೆಳ್ಳಿ ಬೇಕು, ಹಣಬೇಕು, ಹೊಲಬೇಕು ಎಂದು ಆಸೆ ಪಡುತ್ತಾನೆ. ಸಾಕು ಎನ್ನುವುದಿಲ್ಲ. ಸಾಕು ಅಂತಾ ಹೇಳುವುದಾದರೆ ಅನ್ನ ಸಾಕು ಅಂತಾ ಹೇಳುತ್ತಾನೆ. ಅದಕ್ಕೆ ಅನ್ನದಾನ ಮಾಡುವುದರಿಂದ ಪಾಪಕರ್ಮಗಳೆಲ್ಲವೂ ತೊಲಗುವದು ಎಂದರು. ಇದೇ ಸಂದರ್ಭದಲ್ಲಿ ಇವರನ್ನು ಕೂಡಾ ಸಂಘದ ಅಧ್ಯಕ್ಷರು ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯರಾದ ರಮೇಶ ಹರಿವಾಣ, ಮಂಜುನಾಥ ಅಗಸಿಮನಿ, ಲಕ್ಷö್ಮಣ ದೊಡ್ಡಮನಿ, ಗಂಗಾಧರ ನೆಳಗಾಂವಮಠ, ರಫೀಕ ಜಮಾಲಖಾನ, ಬಾಬಾಜಾನ ಬಳಗಾನೂರ, ರಫೀಕ ಲಕ್ಕುಂಡಿ, ವಿಠ್ಠಲ ಕಲ್ಮನಿ, ಮಲ್ಲೇಶ ಆದೋನಿ, ಮಂಜುನಾಥ ಮುಂಡರಗಿ, ಚಂದ್ರು ಮುಂಡರಗಿ, ಸಿದ್ದಣ್ಣ ದ್ಯಾವಣಸಿ, ಹನಮಂತ ಗೆಜ್ಜೇಳ್ಳಿ, ಮಹಾಂತೇಶ ಚಳ್ಳಮರದ, ಸಂಘದ ಸರ್ವ ಪದಾಧಿಕಾರಿಗಳು ಸ್ಟೇಷನ್ ರೋಡಿನ ಸಮಸ್ತ ಅಂಗಡಿಕಾರರು ಈ ಸಂದರ್ಭದಲ್ಲಿ ಇದ್ದರು ಕಾರ್ಯಕ್ರಮವನ್ನು ಮಲ್ಲೇಶಪ್ಪ ಮುಂಡರಗಿ ನಡೆಸಿಕೊಟ್ಟರು. ಪೂಜಾ ಕಾರ್ಯಕ್ರಮವನ್ನು ಶರಣಯ್ಯ ಒಂಟಗುಡಿಮಠ ನಡೆಸಿಕೊಟ್ಟರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು