Thursday, September 19, 2024
Google search engine
Homeಉದ್ಯೋಗಗದಗ : ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ವತಿಯಿಂದ ಸಚಿವರಾದ ಸತೀಶ ಜಾರಕೀಹೊಳಿಯವರಿಗೆ ಸನ್ಮಾನ 

ಗದಗ : ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ವತಿಯಿಂದ ಸಚಿವರಾದ ಸತೀಶ ಜಾರಕೀಹೊಳಿಯವರಿಗೆ ಸನ್ಮಾನ 

ಗದಗ ೦೭: ಗದಗ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ವತಿಯಿಂದ ಕರ್ನಾಟಕ ಸರ್ಕಾರದ ಲೋಕೋಪಯೋಗಿ ಸಚಿವರಾದ ಸತೀಶ ಜಾರಕೀಹೊಳಿಯವರಿಗೆ ಶಿರಹಟ್ಟಿಯ ಶ್ರೀ ಫಕೀರೇಶ್ವರ ಸ್ವಾಮಿಗಳಮಠದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಅಸೋಸಿಯೇಶನ್ ಅಧ್ಯಕ್ಷರಾದ ಕೆ. ವ್ಹಿ. ಪಾಟೀಲರವರು ಸಚಿವರಾಗಿ ಮನವಿ ಸಲ್ಲಿಸಿ ಮಾತನಾಡಿ ಕಳೆದ ಒಂದು ವರ್ಷದಿಂದ ಗುತ್ತಿಗೆದಾರರ ಬಾಕಿ ಬಿಲ್ಲುಗಳು ಹಣ ಭರವಸೆ ಪತ್ರದ ಕೊರತೆಯಿಂದ ಸರಿಯಾಗಿ ಪಾವತಿ ಆಗುತ್ತಿಲ್ಲ. ಈ ಮೊದಲು ಪ್ರತಿ ತಿಂಗಳು ಹಣ ಬಿಡುಗಡೆಯಾಗಿ ನಮ್ಮ ಬಿಲ್ಲುಗಳು ಕಾಲಕಾಲಕ್ಕೆ ಭಾಗಶಃವಾದರೂ ಪಾವತಿ ಆಗುತ್ತಿತ್ತು. ಆದರೆ ಈಗ ಕಳೆದ ೧ ವರ್ಷದಿಂದ ೩ ತಿಂಗಳಿಗೆ ಒಮ್ಮೆರಂತೆ ಹಣ ಬಿಡುಗಡೆ ಆಗುತ್ತಿದ್ದು ಅದೂ ಸಹ ಶೇ. ೫% ರಷ್ಟು ಮಾತ್ರ ಬಿಡುಗಡೆ ಆಗುತ್ತಿರುವುದರಿಂದ ಅದರಂತೆ ನಮಗೂ ಸಹ ಬಿಲ್ಲುಗಳು ಭಾಗಶಃ ಪಾವತಿ ಆಗುತ್ತಿದೆ. ಇದರಿಂದ ಎಲ್ಲಾ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಬ್ಯಾಂಕ್ ಮೂಲಕ ಹಾಗೂ ಖಾಸಗಿ ಸಂಸ್ಥೆಯಿAದ ಹೆಚ್ಚಿನ ಬಡ್ಡಿ ನೀಡಿ ಹಣ ಹೊಂದಾಣಿಕೆ ಮಾಡಿಕೊಂಡು ಕೆಲಸವನ್ನು ನಿಗದಿತ ಸಮಯದಲ್ಲಿ ಮುಕ್ತಾಯ ಮಾಡಿದರೂ ಸಹ ನಮಗೆ ನಿಗದಿತ ಸಮಯದಲ್ಲಿ ಸಂಪೂರ್ಣ ಹಣ ಪಾವತಿ ಆಗದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ.

ಈಗ ಗದಗ ಲೋಕೋಪಯೋಗಿ ವಿಭಾಗ ಕಚೇರಿಯಲ್ಲಿ ಜುಲೈ -೨೦೨೪ ರ ಅಂತ್ಯಕ್ಕೆ ನಮ್ಮ ಎಲ್ಲಾ ಗುತ್ತಿಗೆದಾರರ ಎಲ್ಲಾ ಶೀರ್ಷಿಕೆಗಳಡಿ ಸೇರಿ ಸುಮಾರು ೧೭೦ ಕೋಟಿ ಬಾಕಿ ಇದ್ದು, ಗುತ್ತಿಗದಾರರಿಗೆ ಆರ್ಥಿಕವಾಗಿ ಬಹಳ ತೊಂದರೆಯಾಗಿದೆ. ಮಾನ್ಯ ಸಚಿವರು ಪ್ರತಿ ತಿಂಗಳು ಹಣ ಬಿಡುಗಡೆ ಮಾಡಲು ಅಧಿಕಾರಿಗಳಿಗೆ ಸೂಚಿಸುವಂತೆ ಹಾಗೂ ಕನಿಷ್ಠ ಬಾಕಿ ಬಿಲ್ಲಿನ ಮೊತ್ತದ ಶೇ. ೫೦% ರಷ್ಟು ಬಿಡುಗಡೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಗದಗ ಜಿಲ್ಲಾ ಗುತ್ತಿಗೆದಾರ ಪರವಾಗಿ ವಿನಂತಿಸಿಕೊAಡರು.

ಈ ಸಂದರ್ಭದಲ್ಲಿ ಎಸ್. ಕೆ. ಪಾಟೀಲ, ಕೆ. ಎಸ್. ಹಾದಿಮನಿ, ಎನ್. ಸಿ. ಮಾಗಡಿ, ಎಂ.ಬಿ. ಅಂಗಡಿ, ರಮೇಶ ರಂಗಣ್ಣವರ, ಸಿ. ಜಿ. ಬಿರಾದಾರ, ಶಿವಾನಂದ ಕರೆಯಣ್ಣವರ, ಎಸ್. ಕೆ. ಮುತ್ತಿನಪೆಂಡಿಮಠ, ಬಸವರಾಜ ಶಿರಗುಂಪಿ, ವಾಯ್. ಎಫ್. ಬಳ್ಳಾರಿ, ಸೇರಿದಂತೆ ಇನ್ನೂ ಹಲವಾರು ಗುತ್ತಿಗೆದಾರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು