ಗದಗ ೧೦ : ವ್ಯವಹಾರ ಮಾಡಲು ಬೇರೆ ರಾಜ್ಯದಿಂದ ಬಂದಿರುವ ಕುಟುಂಬಗಳನ್ನು ಒಕ್ಕಲೆಬ್ಬಿಸುತ್ತಿರುವ ಅಧಿಕಾರಿಗಳಿಗೆ ಒಕ್ಕಲೆಬ್ಬಿಸದಂತೆ ಸಲಹೆ ನೀಡಬೇಕೆಂದು ಮುಕ್ತವಾಗಿ ವ್ಯಾಪಾರ ಮಾಡುವ ಸಂವಿಧಾನ ಬದ್ಧ ಹಕ್ಕು ಆಗಿದೆ ಗದಗ ಜಿಲ್ಲಾಧಿಕಾರಿಗಳಿಗೆ ಎಎಮ್ಐಎಂ ಪಕ್ಷದ ಗದಗ ಜಿಲ್ಲಾ ಘಟಕದ ಅಧ್ಯಕ್ಷರಾಧ ಎಮ್. ಎಮ್. ನಾಯಕರ, ಉಪಾಧ್ಯಕ್ಷರಾದ ಎಂ. ಎಸ್. ಚಲವಾದಿ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಎಮ್. ಎಮ್. ನಾಯಕರ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಉತ್ತರ ಪ್ರದೇಶದಿಂದ ಬಂದು ಕೂಲಿನಾಲಿ ಮಾಡುತ್ತ ಸಣ್ಣಪುಟ್ಟ ವ್ಯವಹಾರ ನಡೆಸುತ್ತಿರುವ ಅಲೆಮಾರಿ ಜನಾಂಗ ಖಾಸಗಿ (ಕಳಸಾಪೂರ ರೋಡ್) ಜೀವನ ನಡೆಸುತ್ತಿದ್ದು, ಅವರನ್ನು ಒಕ್ಕಲೆಬ್ಬಿಸುವ ಕೆಲವು ಅಧಿಕಾರಿಗಳು ತೆರವುಗೊಳಿಸಲು ಅವರ ಟೇಂಟ್ಗೆ ಭೇಟಿ ನೀಡಿದ್ದಾರೆ.
ಮಾನ್ಯ ಜಿಲ್ಲಾಧಿಕಾರಿಗಳು ಮಾನವ ಹಕ್ಕುಗಳ ಪ್ರಕಾರ ಅವರ ಜೀವನೋಪಾಯಕ್ಕೆ ಅವರಿಗೆ ಆಶ್ರಯ ಮನೆ ನೀಡಿ ಮೂಲಭೂತ ಸೌಕರ್ಯ ಒದಗಿಸಿ ಅವರ ಮಕ್ಕಳ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಸಲ್ಲಿಸಿದರು.