ಗದಗ : ಕಳೆದ ಹಲವು ದಿನಗಳಿಂದ ಅವಳಿ ನಗರಕ್ಕೆ ಪೂರೈಕೆಯಾಗುವ ತುಂಗಭದ್ರ ನದಿ ಕುಡಿಯುವ ‘ಜೀವ ಜಲ’ ಇಂದು ವ್ಯರ್ಥವಾಗಿ ಪೋಲಾಗುತ್ತಿದ್ದರೂ ಗದಗ-ಬೆಟಗೇರಿ ನಗರಸಭೆ ಆಡಳಿತ ಕಣ್ಣುಮಚ್ಚಿ ಕುಳಿತಿದೆ.
ಅಡವಿಸೋಮಾಪೂರ ಗ್ರಾಮದ ರಸ್ತೆಯ ಮೇಲೆ ಬಳಿ ನಿತ್ಯ ಕೊರ್ಲಹಳ್ಳಿಯಿಂದ ತುಂಗಭದ್ರ ನೀರು ಗದಗ ನಗರಕ್ಕೆ ಹರಿದು ಬರುವುದರೊಳಗೆ ಮಾರ್ಗದ ಎಡಕ್ಕೆ ಇರುವ ಅಡವಿಸೋಮಾಪೂರ ಗ್ರಾಮದ ದೊಡ್ಡ ಹಳ್ಳದ ಪಕ್ಕ ಸೋರಿಕೆಯಾಗುತ್ತಿದೆ. ಹರಿದು ಬರುವ ನೀರಿನಲ್ಲಿಅಂದಾಜು ಶೇ. 25 , ಪೋಲಾಗಿ ರಸ್ತೆಯಲ್ಲಿ ಹರಿದು ಹೋಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಒಡೆದ ಪೈಪ್ ದುರಸ್ತಿ ಮಾಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.