ಗದಗ ೦೩: ಸ್ವಾಭಿಮಾನಿ ರಕ್ಷಣಾ ವೇದಿಕೆ ರೋಣ ತಾಲೂಕ ಅಧ್ಯಕ್ಷರು ಎಮ್ ಎಚ್ ನದಾಫ ಹಾಗೂ ಗದಗ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ಹಾದಿಮನಿರವರ ನೇತೃತ್ವದಲ್ಲಿ ಹೊಳೆ ಆಲೂರದಲ್ಲಿರುವ ಸರಕಾರಿ ಪಾಲಿಟೆಕ್ನಿಕಲ್ ಕಾಲೇಜು ಮತ್ತು ಇಂದಿರಾಗಾಂಧಿ ವಸತಿ ಶಾಲೆಗೆ ಕೋರಿಕೆ ಬಸ್ ನಿಲ್ದಾಣದ ನಾಮಫಲಕವನ್ನು ಕಾಲೇಜು ಎದುರುಗಡೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಊರಿನ ಹಿರಿಯರ ಹಾಗೂ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ನಾಮಫಲಕವನ್ನು ಅಳವಡಿಸಲಾಯಿತು.
ಈ ಸಂದರ್ಭದಲ್ಲಿ ಅಂಜುಮನ ಅಧ್ಯಕ್ಷರಾದ ಎಫ್ ಎಸ್ ಚಿಕ್ಕಮನ್ನೂರ, ಶ್ರೀ ವಾಸುದೇವ ಪವಾರ ಮುಖ್ಯೋಪಾಧ್ಯಾಯರಾದ ವಿನೋದ, ರಾಜು ಮುಲ್ಲಾ, ಕಾರ್ತಿಕ ಬಡಿಗೇರ, ಶರೀಫ ನದಾಫ, ಶರಣಪ್ಪ ಪೂಜಾರ, ಹನುಮಂತ ಹಳ್ಳಿಕೇರಿ, ಸಂಕೇತ ದಾನರೆಡ್ಡಿ, ಪ್ರಜ್ವಲ್, ಯಮನೂರುಸಾಬ ನದಾಫ, ರಾಘು ಬಡಿಗೇರ, ನಿಖಿಲ್ ಬೆನಕಟ್ಟಿ. ಭಾಷಾಸಾಬ ಗೌಂಡಿ, ರೆಹಮಾನಸಾಬ ಮುಲ್ಲಾ ಇನ್ನೂ ಅನೇಕ ಉಪಸ್ಥಿತರಿದ್ದರು.