ಶ್ರೀ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಪರಿಸರ ದಿನಾಚರಣೆ
ಗದಗ ೦೯: ಪೂಜ್ಯ ಶ್ರೀ ಮನ್ನಿರಂಜನ ಜಗದ್ಗುರು ತೋಂಟದ ಡಾ. ಸಿದ್ದರಾಮ ಶಿವಯೋಗಿಗಳವರ ಕೃಪಾಶೀರ್ವಾದದಲ್ಲಿ ನಡೆದುಬಂದ ಶ್ರೀ ಅಕ್ಕಮಹಾದೇವಿ ಯೋಗ ವಿಜ್ಞಾನ ಕೇಂದ್ರದ ವತಿಯಿಂದ ಪರಿಸರ ದಿನಾಚರಣೆ ಆಚರಿಸಲಾಯಿತು.
ಶ್ರೀ ಅಕ್ಕಮಹಾದೇವಿ ತಾಯಿಯವರು ಪರಿಸರ ಪ್ರೇಮಿ, ಚಿಕ್ಕ ವಯಸ್ಸಿನಲ್ಲಿರುವಾಗಲೇ ಮನೆ, ಮಠಗಳನ್ನು ತ್ಯಜಿಸಿ ಕಾಡು ಮೇಡುಗಳೊಂದಿಗೆ ಅಲೆಯುತ್ತಾ ತನ್ನ ಸಂಗಾತಿಯಾದ ಚನ್ನಮಲ್ಲಿಕಾರ್ಜುನನ್ನು ನೆನೆಯುತ್ತಾ ಎಲ್ಲ ತರುಲತೆಗಳಿಗೆ ಚನ್ನಮಲ್ಲಿಕಾರ್ಜುನನ್ನು ಕಂಡಿರೇನು? ಕಂಡಿರೇನು? ಎನ್ನುತಾ ಚೆನ್ನಮಲ್ಲಿಕಾರ್ಜುನನ ಹೆಸರನ್ನು ಹಲಬುತ್ತಾ ಕೊನೆಗೆ ದಟ್ಟಕಾಡು ಆಗಿರುವ ಕದಳಿಗೆ ಹೋದ ಪ್ರಯುಕ್ತ ದಿನಾಂಕ: ೨೫-೦೬-೨೦೨೪ ಮಂಗಳವಾರದAದು ಪರಿಸರ ದಿನಾಚರಣೆಯನ್ನು ತೋಂಟದಾರ್ಯ ಮಠದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ಅಧ್ಯಕ್ಷರಾದ ಸುವರ್ಣ ಹೊಸಂಗಡಿ, ಕಾರ್ಯದರ್ಶಿ ಶೀಲಾ ಗೋಟಡಕಿ, ಖಜಾಂಚಿ ಲಲಿತಾ ಉಮನಾಬಾದಿ, ಗೌರವ ಅಧ್ಯಕ್ಷರಾದ ಶರಣೆ ರತ್ನಾಕ್ಕಾ ಪಾಟೀಲ, ನಿರ್ಮಲಾ ಪಾಟೀಲ, ಶಿವಲೀಲಾ ಅಕ್ಕಿ, ಅಕ್ಕಮಹಾದೇವಿ ಚಟ್ಟಿ, ಶ್ರೀದೇವಿ ಶೆಟ್ಟರ, ವಿಶಾಲಾಕ್ಷಿ ಕರಗೋಡ, ಸುವರ್ಣ ವಸ್ತçದ, ಸುಮಾ ಪಾಟೀಲ, ಅರುಣಾ ಹಳಕಟ್ಟಿ, ವಿದ್ಯಾ ಗಂಜಿಹಾಳ, ಪುಷ್ಪಾ ಭಂಡಾರಿ, ಸುಗ್ಗಲಾ ಯಳಮಲ್ಲಿ, ರೇಣುಕಾ ಅಮಾತ್ಯ, ಸಂಗೀತಾ ಪಟ್ಟಣಶೆಟ್ಟಿ, ಜಯಶ್ರೀ ಹಳ್ಳಿಕೇರಿ ಇನ್ನೂ ಅನೇಕ ಸದಸ್ಯನಿಯರು ಅಕ್ಕಮಹಾದೇವಿ ಕೇಂದ್ರದೊಂದಿಗೆ ಸಹಕರಿಸಿದ ಸತ್ಯಬಾಯಿ ಸಂಘದ ಸರ್ವ ಸದಸ್ಯನಿಯರು ಮತ್ತು ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಾರ್ಥನೆ ಹಾಗೂ ಮಂಗಳದೊAದಿಗೆ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.