15.7 C
New York
Friday, May 9, 2025

Buy now

spot_img

ಗದಗ : ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ

ಗದಗ  ಫೆಬ್ರುವರಿ 17: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಬೆಂಗಳೂರು ಇವರ ಪ್ರಾಯೋಜಿಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಬಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರು ಸಂಕಲ್ಪ ಯೋಜನೆಯಡಿ ಗದಗ ಜಿಲ್ಲೆಯ ರಾಷ್ಟಿçÃಯ ಜೀವನೋಪಾಯಡಿ ಆಯ್ಕೆಯಾದ ವಿವಿಧ ನಗರ ಸ್ಥಳಿಯ ಸಂಸ್ಥೆ ವ್ಯಾಪ್ತಿಯ ಸ್ವ-ಸಹಾಯ ಸಂಘದ ಮಹಿಳಾ ಸದಸ್ಯರಿಗೆ 5 ದಿನದ ವಸತಿಯುತ ಉದ್ಯಮಶೀಲತಾ ತರಬೇತಿಯ ಸಮಾರೋಪ ಸಮಾರಂಭವನ್ನು ಇತ್ತೀಚೆಗೆ ಹುಲಕೋಟಿಯ ಕೃûಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಪ್ರಮಾಣ ಪತ್ರ ವಿತರಕರಾಗಿ ಆಗಮಿಸಿದ, ಸಿಡಾಕ್ ಧಾರವಾಡದ ನಿರ್ದೇಶಕರಾದ ಬಸವರಾಜ. ಗೋಟುರ ಭಾಗವಹಿಸಿ, ಈಗಾಗಲೆ ತಾವೆಲ್ಲ ಸ್ವ ಸಹಾಯ ಸಂಘದ ನೇರವಿನಿಂದ ಚಟುವಟಿಕೆಗಳನ್ನು ಮಾಡುತ್ತಿರುತ್ತಿರಿ, ಈ ತರಬೇತಿಯಿಂದ ಅವುಗಳನ್ನು ವಾಣಿಜ್ಯ ಚಟುವಟಿಕೆಗಳನ್ನಾಗಿಸಿ, ಉದ್ಯಮಿಯಾಗಬೇಕೆಂದು ಹೇಳಿದರು.

 ಮುಖ್ಯ ಅತಿಥಿಗಳಾಗಿ ಭಾಗವಹಿಸಿದ, ಕೃಷಿ ವಿಜ್ಞಾನ ಕೇಂದ್ರದ ಅಡ್ವೆöÊಜರ್, ಡಾ. ಏಲ್. ಜಿ. ಹಿರೇಗೌಡರ ಅವರು ಮಾತನಾಡುತ್ತ, ಸಿಡಾಕ್ ಸಂಸ್ಥೆ ಮೊದಲಿನಿಂದಲೂ ಒಳ್ಳೆಯ ತರಬೇತಿ ನಿಡುತ್ತಾ ಬರುತ್ತಿದೆ. ಮುಂದೆ ನಮ್ಮ ಕೆ.ವಿ.ಕೆ ಸಂಸ್ಥೆಯಿAದ ಲೆಬಲಿಂಗ್, ಪ್ಯಾಕೆಜಿಂಗ್, ಮಾರುಕಟ್ಟೆ ಹೀಗೆ ಇನ್ನಿತರ ಸಹಾಯ ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ, ಸತತ ಪ್ರಯತ್ನದಿಂದ ತಾವೆಲ್ಲರೂ ಉದ್ಯಮಿಗಳಾಗಿ ಎಂದು ತಿಳಿಸಿದರು.

ಅತಿಥಿಗಳಾಗಿ ಭಾಗವಹಿಸಿದ, ಡೇ-ನಲ್ಮ್ ಜಿಲ್ಲಾ ಅಭಿಯಾನ ವ್ಯವಸ್ಥಾಪಕರಾದ ಅಮರೇಶ. ಆರ್. ಅವರು ಯಶಸ್ವಿ ತರಬೇತಿ ಮಾಡಿದ್ದಕ್ಕಾಗಿ, ಸಿಡಾಕ್ ಸಂಸ್ಥೆಯನ್ನು ಅಭಿನಂಧಿಸಿದರು. ಈ ತರಬೇತಿ ಮುಗಿದ ನಂತರ ಒಂದು ಒಳ್ಳೆಯ ಉದ್ಯಮವನ್ನು ಆಯ್ಕೆ ಮಾಡಿ, ಉದ್ಯಮವನ್ನು ಪ್ರಾರಂಭಿಸಬೇಕೆAದು ನುಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಿಡಾಕ್, ಧಾರವಾಡದ ಜಂಟಿ ನಿರ್ದೇಶಕರಾದ ಚಂದ್ರಶೇಖರ. ಎಚ್. ಅಂಗಡಿಯವರು ಮಾತನಾಡಿ ಈ ತರಬೇತಿ ಯಶಸ್ವಿಯಾಗಲು ಸಂಘದ ಮಹಿಳಾ ಸದಸ್ಯರ ಆಸಕ್ತಿ ಹಾಗೂ ಜಿಲ್ಲೆಯ ಸಿ.ಆರ್.ಪಿ. ಅವರ ಶ್ರಮ ಇದೆ, ಜೊತೆಗೆ ಕೆ.ವಿ.ಕೆ ಯಲ್ಲಿ ಕಲಿಕಾ ವಾತವರಣ ಇದೆ. ತಾವೆಲ್ಲರೂ ಈ ತರಬೇತಿಯಿಂದ ಮುಂದೆ ಮಹಿಳಾ ಉದ್ಯಮಿಗಳಾಗಿ ಉದ್ಯೋಗ ನೀಡಬೇಕೆಂದು ಹೇಳಿದರು.

ತರಬೇತಿ ಕೊನೆಯ ದಿನದ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರೂಪಾ. ಶಿರಿಯಪ್ಪಗೌಡರ ಹಾಗೂ ಪ್ರವೀಣ. ಅಂಗಡಿ ಅವರು ಬೋಧಿಸಿದರು.

ಕಾರ್ಯಕ್ರಮದಲ್ಲಿ ಮಂಜುನಾಥ ಮುಳಗುಂದ, ತರಬೇತುದಾರರು ಸಿಡಾಕ್, ನಿರೂಪಿಸಿದರು. ವಿಜಯಲಕ್ಷಿ÷್ಮÃ. ನೆಲ್ಲೂರ ತರಬೇತುದಾರರು, ಸಿಡಾಕ್ ಇವರು ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಗದಗ : ಭೋವಿ ಸಮಾಜದ ಹೆಮ್ಮೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿ