ಗದಗ : ಮದಗಜಗಳಂತೆ ಸೆಣಸಾಡಿ ಕುಸ್ತಿ ಅಖಾಡಕ್ಕೆ ಮೆರುಗು ನೀಡಿದ ಕುಸ್ತಿಪಟುಗಳು, ರಣೋತ್ಸಾಹ ಹೆಚ್ಚಿಸಿದ ಹಲಗೆ ವಾದನ ಮತ್ತು ಪ್ರೇಕ್ಷ ಕರ ಮುಗಿಲು ಮುಟ್ಟುವಂತಿದ್ದ ಸಿಳ್ಳೆ, ಕೇಕೆ.. ಲಕ್ಕುಂಡಿ ಹಾಲಗೊಂಡ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬಯಲು ಜಂಗಿ ಕುಸ್ತಿ ಇಂದು ಕೊನೆಯ ಶುಕ್ರವಾರ ನಡೆದ ಕುಸ್ತಿ ಪಂದ್ಯಾವಳಿ ಜನಪ್ರಿಯತೆಯನ್ನು ಸಾಕ್ಷೀಕರಿಸಿತು.
ಲಕ್ಕುಂಡಿ : ಗದಗ ಜಿಲ್ಲೆಯ ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗೊಂಡ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಕೊನೆಯ ದಿನದ ನಡೆದ ಪುರುಷ ಬಯಲು ಜಂಗಿ ನಿಖಾಲಿ ಕುಸ್ತಿ ಪಂದ್ಯಾವಳಿಯ ಫೆನಲ್ನಲ್ಲಿ ಲಕ್ಕುಂಡಿಯ ಮಂಜುನಾಥ ಲಕ್ಕುಂಡಿ ಅವರನ್ನು ಗುಲ್ಬರ್ಗಾ ಕ್ರಷ್ಣಾ ಅವರು ಸೋಲಿಸುವ ಮೂಲಕ ಪ್ರಶಸ್ತಿಯನ್ನು ತನ್ನಾದಾಗಿಸಿಕೊಂಡರು.
10 ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಡಿದ ಕ್ರಷ್ಣಾ ಗುಲ್ಬರ್ಗ ಪೈಲ್ವಾನ ಮತ್ತು ಮಂಜುನಾಥ ಲಕ್ಕುಂಡಿ ಜೋಡಿ ನೋಡುಗರಲ್ಲಿ ಮನರಂಜನೆ ತುಂಬಿತ್ತು. ಇಬ್ಬರು ಪೈಲ್ವಾನರು ಸಮಸ್ಥಿತಿಯಲ್ಲಿ ಹೋರಾಡುತ್ತಿರುವುದು ಎಲ್ಲರಲ್ಲಿಯೂ ಉತ್ಸುಕತೆ ಇಮ್ಮಡಿಸಿತ್ತು ಕೊನೆಗೆ ಗುಲ್ಬರ್ಗಾ ಕ್ರಷ್ಣಾ ಲಕ್ಕುಂಡಿ ಗ್ರಾಮದ ಪೈಲ್ವಾನ್ ಮಂಜುನಾಥ ಲಕ್ಕುಂಡಿ ಯವರನ್ನು ನೆಲಕ್ಕುರುಳಿಸಿ ವಿಜಯಶಾಲಿಯಾದರು.
ಈ ಸಂದರ್ಭದಲ್ಲಿ ಲಕ್ಕುಂಡಿ ಗ್ರಾಮ ಪಂಚಾಯತ ಅಧ್ಯಕ್ಷರು/ ಹಾಗೂ ಸರ್ವ ಸದಸ್ಯರು ಗ್ರಾಮದ ಹಿರಿಯರು ,ಯುವಕರು, ಮಾಜಿ ಕುಸ್ತಿಪಟುಗಳು ಹಾಜರಿದ್ದರು.