ಹುಬ್ಬಳ್ಳಿ / ಗದಗ : ಪ್ರಯಾಣಿಕರ ಅನುಭವವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ)ಯು ತನ್ನ ನಿಯಮಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡುತ್ತಿದ್ದು, UPI ಮೂಲಕ ಪಾವತಿ ಮಾಡಿ ಟಿಕೆಟ್ ಖರೀದಿ ಮಾಡುವ ಅವಕಾಶ ಒದಗಿಸಲು ಅವಕಾಶ ನೀಡಿದೆ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಸಾರ್ವಜನಿಕ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸಿ , ಸಾರಿಗೆ ವ್ಯವಸ್ಥೆಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆಯನ್ನು ಉತ್ತಮಪಡಿಸಲು ನಗದುರಹಿತ ” UPI ” ವಹಿವಾಟುಗಳ ಮೂಲಕ ಟಿಕೇಟ ವಿತರಣೆಯನ್ನು ದಿನಾಂಕ : 01-09-2023 ರಿಂದ ಪ್ರಾರಂಭಿಸಿದ್ದು , ಪ್ರಸ್ತುತ ಸಂಸ್ಥೆಯ 51 ಘಟಕಗಳಲ್ಲಿ ನಿರ್ವಹಿಸಲಾಗುತ್ತಿದೆ .
ಇಲ್ಲಿಯವರೆಗೆ ಅಂದರೆ ದಿನಾಂಕ : 27-08-2024 ರ ವರೆಗೆ UPI ವಹಿವಾಟಿನಿಂದ ಒಟ್ಟು 4290 ಲಕ್ಷ ವಹಿವಾಟು ( Transaction ) ಗಳಿಂದ ರೂ . 38.69 ಕೋಟಿ ಸಂಗ್ರಹವಾಗಿರುತ್ತದೆ . ಪ್ರಸ್ತುತ ಪ್ರತಿ ದಿನ ಸರಾಸರಿ 27005 ವಹಿವಾಟುಗಳಿಂದ ರೂ .22.52 ಲಕ್ಷಗಳಷ್ಟು ಸಂಗ್ರಹವಾಗುತ್ತಿದೆ . ಸದರಿ UPI ವಹಿವಾಟು ವ್ಯವಸ್ಥೆಯನ್ನು ಸಂಸ್ಥೆಯ ವಾಣಿಜ್ಯ ಆದಾಯ ಪ್ರಾಸಂಗಿಕ ಕರಾರು ಮೊತ್ತ ಪಾವತಿ , ಮಾಸಿಕ ಪಾಸು ಆದಾಯ ಹಾಗೂ ಮುಂಗಡ ಆಸನ ಕಾಯ್ದಿರಿಸುವ ಕೌಂಟರಗಳಲ್ಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ .