ಗದಗ : ಗದಗ ತಾಲೂಕಿನ ಅಡವಿಸೋಮಾಪೂರ ಗ್ರಾಮದ ಬಿಪಿನ್ ಚಿಕ್ಕಟ್ಟಿ ಸ್ಕೂಲ್ ಮುಂಬಾಗ ಇರುವ 63 ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಎರಡು KSRTC ಬಸ್ಸುಗಳ ನಡುವೆ ಅಪಘಾತ ನಡೆದಿದೆ.
ಅಡವಿಸೋಮಾಪೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 63 ರಸ್ತೆ ತಿರುವಿನಲ್ಲಿ ಎರಡು KSRTC ಬಸ್ಸುಗಳ ನಡುವೆ ಅಪಘಾತವು ಶನಿವಾರ ಮಧ್ಯಾಹ್ನ 1 ಗಂಟೆಗೆ ಈ ಭಾರಿ ದುರಂತ ತಪ್ಪಿದೆ ಎನ್ನಬಹುದು.
ಕೊಪ್ಪಳ ಕಡೆ ಇಂದ ಬರುವ KSRTC ಬಸ್ ನಂ KA-೩೧-F-೧೫೨೫ ಹಾಗೂ ಗದಗ ಇಂದ ಮುಂಡರಗಿ ಕಡೆ ಹೋಗುವ ಬಸ್ ನಂ KA-೨೬F-೧೦೨೭ ಈ ಎರಡು ಬಸ್ಸುಗಳು ರಾಷ್ಟ್ರೀಯ ಹೆದ್ದಾರಿ 63 ರಸ್ತೆ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ
ಈ ಅಪಘಾತದಲ್ಲಿ ಐದು ಜನರಿಗೆ ಗಂಭಿರ ಗಾಯಗಳಾಗಿದ್ದು , 20 ಕ್ಕೂ ಹೆಚ್ಚು ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ . ಗಾಯಾಳುಗಳನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ . ಎಂದು ತಿಳಿದು ಬಂದಿದೆ.
ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.