14.4 C
New York
Friday, May 9, 2025

Buy now

spot_img

ಗದಗ : ಹೊಳೆ ಮಣ್ಣೂರ ಸ್ಕೂಲ್ ನಲ್ಲಿ SBGP ಬ್ಯಾಂಕ್ ಸ್ಥಾಪನೆ

ಮಕ್ಕಳೆ ನಿರ್ವಹಿಸುವ ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ..

ರೋಣ:- ಓದು ಬರಹ ಗೊತ್ತಿದ್ದರೂ ಸಹ ಬ್ಯಾಂಕ್ ನಲ್ಲಿ ಹೋದಾಗ ಅಲ್ಲಿ ಹಣ ತುಂಬುವ, ತೆಗೆಯುವ ಚಲನ್‌ ಭರ್ತಿ ಮಾಡುವಂತೆ ಗೋಗೆರೆಯುವ ಕೆಲವರನ್ನು ಕಾಣುತ್ತೇವೆ. ಆದರೆ ಈ ಸ್ಕೂಲ್ ಮಕ್ಕಳಿಗೆ ಅದೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಶಾಲೆ ಕಲಿಯುವಾಗಲೇ ನೀಡುತಿದ್ದಾರೆ ಜೊತೆಗೆ ಸ್ಕೂಲ್ ಮಕ್ಕಳೆ ಬ್ಯಾಂಕ್ ನಡೆಸಿಕೊಂಡು ಹೋಗುತ್ತಿದ್ದಾರೆ ಅದುವೆ SBGP ಇದು ಮಕ್ಕಳೇ ನಿರ್ವಹಿಸುವ ಮಾದರಿ ಸ್ಕೂಲ್‌ ಬ್ಯಾಂಕ್! ಎನಿದರ ವಿಶೇಷ ?

ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ್ SBGP ಗೆ ಚಾಲನೆ

ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ ಕಂದಕೂರ ಅವರು ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ್ SBGP ಗೆ ಸರ್ಕಾರಿ ಪ್ರೌಢಶಾಲೆ ಹೊಳೆ ಮಣ್ಣೂರು ದಲ್ಲಿ ಚಾಲನೆ ನೀಡಿದರು. ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಉಳಿತಾಯ ಮನೋಭಾವ ಬೆಳೆಸುವುದು ಹಾಗೂ ಬ್ಯಾಂಕಿಂಗ್ ಹಣಕಾಸಿನ ವಿಷಯದ ಕುರಿತು ಜಾಗೃತಿ ಮೂಡಿಸುವುದು ಇಂತಹ ಘನ ಉದ್ದೇಶಗಳೊಂದಿಗೆ ಗ್ರಾಮ ಪಂಚಾಯತಿಯು ವಿದ್ಯಾರ್ಥಿಗಳಿಗಾಗಿ ಬ್ಯಾಂಕ್ ಸ್ಥಾಪನೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹೊಳೆಮಣ್ಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸರಕಾರಿ ಪ್ರೌಢಶಾಲೆ ಹಾಗೂ ಎರಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು ಸೇರಿದಂತೆ ಒಟ್ಟು ಮೂರು ಶಾಲೆಗಳು 458 ವಿದ್ಯಾರ್ಥಿ ವಿದ್ಯಾರ್ಥಿನಿಯರು ಇದ್ದು, ಎಲ್ಲರಿಗೂ ಪಾಸ್ ಬುಕ್ ವಿತರಿಸುವ ವ್ಯವಸ್ಥೆಯನ್ನು ಗ್ರಾಮ ಪಂಚಾಯತಿಯಿಂದ ಮಾಡಿಕೊಳ್ಳಲಾಗಿದೆ. ಈಗಾಗಲೇ ಶೇಕಡ 50ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು SBGP ಯಲ್ಲಿ ತಮ್ಮ ಖಾತೆ ತೆರೆದು ಬ್ಯಾಂಕ್ ಪಾಸ್ ಬುಕ್ ವಿತರಿಸಲಾಗಿದೆ. ಪ್ರತಿಯೊಬ್ಬ ವಿಧ್ಯಾರ್ಥಿಯ ಖಾತೆದಾರರಿಗೂ ಒಂದು ಪಾಸ್ ಬುಕ್ ನೀಡಲಾಗುತ್ತದೆ ಹಾಗೂ ಅವರ ಬಳಿ ಇರುತ್ತದೆ ಆ ಪಾಸಬುಕ್ ಮೂಲಕವೇ ವ್ಯವಹಾರ ನಡೆಯುತ್ತದೆ ವಿಧ್ಯಾರ್ಥಿಗಳಿಗೆ ಬೇಕಾದಾಗ ತೆಗೆದುಕೊಳ್ಳಬಹುದು, ಹಾಗೂ ಜಮಾ ಮಾಡಲುಬಹುದು

ಏನಿದು ಸ್ಕೂಲ್ ಬ್ಯಾಂಕ್ ಆಫ್ ಜಿಪಿ, ಎನಿದರ ವಿಶೇಷ

1)ಸ್ಕೂಲ್ ಬ್ಯಾಂಕ್ ಆಫ್ ಗ್ರಾಮ ಪಂಚಾಯತ್ (SBGP) ಇದು ಹೊಳೆಮಣ್ಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗಾಗಿ ಮಾತ್ರ ತೆರೆದ ಬ್ಯಾಂಕ್ ಆಗಿರುತ್ತದೆ.

2) ಪ್ರತಿ ಶನಿವಾರ 9:00ಯಿಂದ 10 ಗಂಟೆಗೆ ಬ್ಯಾಂಕ್ ತಮ್ಮ ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತದೆ.

ಪ್ರತಿ ಶಾಲೆಯ ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ ಮತ್ತು ಹಣಕಾಸು ಮಂತ್ರಿ ರವರನ್ನು ಒಬ್ಬ ಬ್ಯಾಂಕರ್ ಒಬ್ಬ ಕ್ಯಾಷರ್ ರನ್ನಾಗಿ ನಿಯಮಿಸಿ ಬ್ಯಾಂಕ್ ವೈವಾಟಿನ ತರಬೇತಿ ನೀಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ SBGP ಬ್ಯಾಂಕಿನ ಜವಾಬ್ದಾರಿ ವಹಿಸಲಾಗಿದೆ.

3) ಆಸಕ್ತ ಖಾತೆದಾರ ವಿದ್ಯಾರ್ಥಿಗಳು ಕನಿಷ್ಠ ಎರಡು ರೂಪಾಯಿಯಿಂದ ಗರಿಷ್ಠ 20 ರೂಪಾಯಿಯವರೆಗೆ ಉಳಿತಾಯ ಖಾತೆಯಲ್ಲಿ ಜಮೆ ಮಾಡಬಹುದು ಅಥವಾ ಖಾತೆಯಲ್ಲಿ ಜಮೆ ಇರುವ ಮೊತ್ತವನ್ನು ಪಡೆಯಬಹುದು.

4) ಪ್ರತಿ ವಿದ್ಯಾರ್ಥಿಗೆ ಪ್ರತ್ಯೇಕ ಪಾಸ್ ಪುಸ್ತಕ ಒದಗಿಸಲಾಗಿದೆ.

5) ವಾರ್ಷಿಕವಾಗಿ ಅತಿ ಹೆಚ್ಚು ಸಲ ವ್ಯವಹರಿಸಿದ/ ಹೆಚ್ಚು ಉಳಿತಾಯ ಮಾಡಿದ ಖಾತೆದಾರರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸುಜಾತ ಮಠಪತಿ ಗ್ರಾಮ ಪಂಚಾಯಿತಿ ಸದಸ್ಯರು ಮುಖ್ಯ ಉಪಾಧ್ಯಾಯರು ಅರಿವು ಕೇಂದ್ರದ ಮೇಲ್ವಿಚಾರಕರು ಗ್ರಾಮೀಣ ಪುನರ್ ವಸತಿ ಕಾರ್ಯಕರ್ತರು ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ