15.7 C
New York
Friday, May 9, 2025

Buy now

spot_img

ಗದಗ : ಜಯ ಕರ್ನಾಟಕ ಗದಗ ಜಿಲ್ಲಾ ಘಟಕದ ವತಿಯಿಂದ ಡಾ. ಎಚ್. ಕೆ. ಪಾಟೀಲರಿಗೆ ಮತ್ತು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ 

ಗದಗ ೧೬: ಗದಗ ಬೆಟಿಗೇರಿ ಅವಳಿ ನಗರದ ಹೃದಯ ಭಾಗಲದಲ್ಲಿರುವ ನಗರಸಭೆ ಮಾಲಿಕತ್ವದ ೫೪ ವಕಾರ ಸಾಲುಗಳನ್ನು ಕಾನೂನುಬಾಹಿರವಾಗಿ ದೀರ್ಘ ಅವಧಿಯವರೆಗೆ ನಗರಸಭೆಯ ಅಧ್ಯಕ್ಷರು, ಸದಸ್ಯರು ಹಾಗೂ ಖಾಸಗಿ ವ್ಯಕ್ತಿಗಳು ಸುಳ್ಳು ಠರಾವು ಸೃಷ್ಠಿಸಿ ಒಪ್ಪಂದ ಮಾಡಿಕೊಂಡಿದ್ದಾರೆ. ೨೦೨೩ರ ಅಕ್ಟೋಬರ್ ೨೫ರಿಂದ ೨೦೨೪ ರ ಜುಲೈ ೨೨ರ ನಡುವಿನ ಅವಧಿಯಲ್ಲಿ ನಗರಸಭೆಯ ಮಾಲೀಕತ್ವದ ಸಾವಿರಾರು ಕೋಟಿ ಮೌಲ್ಯದ ೫೪ ವಕಾರು ಸಾಲುಗಳನ್ನು ಕಾನೂನುಬಾಹಿರವಾಗಿ ದೀರ್ಘಾವಧಿಗೆ ಒಪ್ಪಂದ ಮಾಡಿಕೊಂಡಿದ್ದೆವೆ ಎಂದು ಸೃಷ್ಟಿಸಿದ್ದಾರೆ. ೨೦೨೪ರ ಫೆಬ್ರುವರಿ ೯ ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸಾಗಿದೆ ಎಂದು ನಕಲಿ ಠರಾವು ಸೃಷ್ಟಿಸಿ ೨೦೨೪ ರ ಜುಲೈ ೨೨ರಂದು ವಾಕಾರ ಸಾಲಿನ ಎಲ್ಲಾ ಅನುಭೋದಾರರಿಗೆ ಕಬ್ಜಾ ನೀಡಲಾಗಿದೆ ಎಂದು ನಕಲಿ ಪತ್ರವನ್ನು ಸೃಷ್ಟಿಸಿ ಎರಡು ಅಧಿಕಾರಿಗಳ ನಕಲಿ ಸಹಿಯನ್ನು ಮಾಡಿ ಗದಗ ಬೆಟಿಗೇರಿ ನಗರಸಭೆಗೆ ಹಾಗೂ ಸರ್ಕಾರಕ್ಕೆ ಮೋಸ ಮಾಡಿದ್ದಾರೆ.

ಮೊದಲೆ ಗದಗ-ಬೆಟಿಗೇರಿಯ ನಗರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಕಾರಣ ಕೇಳಿದರೆ ನಗರಸಭೆಗೆ ಆದಾಯ ಕಡಿಮೆ ಇದೆ ಎಂದು ಹೇಳುತ್ತಾರೆ. ಬಹುಕೋಟಿ ಮೌಲ್ಯದ ವಕಾರ ಸಾಲನ್ನಲ್ಲಿ ಹಲವಾರು ಮಳಿಗೆಗಳು, ಆಸ್ಪತ್ರೆಗಳು, ಮಾರುಕಟ್ಟೆಗಳನ್ನು ಸೃಷ್ಟಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟರೆ ಅದರಿಂದ ಲಕ್ಷಾಂತರ ರೂಪಾಯಿ ಆದಾಯ ನಗರಸಭೆಗೆ ಹರಿದು ಬರುತ್ತದೆ ಅದರಿಂದ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಅವಳಿ ನಗರದಲ್ಲಿ ಮಾಡಬಹುದಾಗಿದೆ.

ಈ ತರಹ ಸುಳ್ಳು ಠರಾವು ಸೃಷ್ಟಿಸಿದ್ದು ನೋಡಿದ್ದರೆ, ನಾವು ತಮಗೆ ಮನವಿ ಮಾಡುತ್ತೇವೆ ಇಷ್ಟು ದಿನಗಳ ಕಾಲ ಮಾಡಿರುವಂತ ಎಲ್ಲ ಠರಾವುನ್ನು ಬಹಿರಂಗ ಮಾಡಬೇಕು ಮತ್ತೆ ಈಗಾಗಲೇ ಈ ಸುಳ್ಳು ಠರಾವುನ್ನು ಕೋರ್ಟಿಗೆ ಸಲ್ಲಿಸಿದ್ದ ಕಾರಣಕ್ಕಾಗಿ ಇದನ್ನ ಒಬ್ಬ ನ್ಯಾಯಾಧೀಶರಿಂದ ಸಮಗ್ರ ತನಿಖೆ ಮಾಡಿಸಬೇಕು ಅವಳಿ ನಗರದ ಜನರಿಗೆ ನ್ಯಾಯ ಕೊಡಿಸಬೇಕು ಸರ್ಕಾರಕ್ಕೆ ಮೋಸವಾಗುವುದನ್ನ ತಡೆಗಟ್ಟಬೇಕೆಂದು ಒತ್ತಾಯಿಸುತ್ತೇವೆ.

ಈ ಸಂದರ್ಭದಲ್ಲಿ ಚಂದ್ರಕಾಂತ ಚವ್ಹಾಣ ರಾಜ್ಯ ಪ್ರಧಾನ ಕಾರ್ಯದರ್ಶಿ, ಭಾಷಾಸಾಬ ಮಲ್ಲಸಮುದ್ರ, ರಫೀಕ ತೋರಗಲ್ಲ, ರಮೇಶ ರಾಠೋಡ, ನಾಗರಾಜ ಕ್ಷತ್ರಿಯ, ಚಂದ್ರು ಖಾನಾಪೂರ, ಇಮಾಮ ಮಜ್ಜೂರ, ಮಂಜು ಕುರಬರ, ಹನಮಂತಗೌಡ ಪಾಟೀಲ, ದಾದು ಮುಂಡರಗಿ, ಸಾದಿಕ್ ನರಗುಂದ, ಮೇಘರಾಜ ಮೇಲ್ಮನಿ, ಹನಮಂತ ಹುಲಿಕಟ್ಟಿ, ರಫೀಕ ಟಪಾಲವಾಲೆ, ಕಾರ್ತಿಕ, ಕುಮಾರ ತಳವಾರ, ಸುನೀಲ ಪೂಜಾರ, ಅಕ್ಬರ, ಹಾಗೂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ IPL 2025: 35 ಎಸೆತಗಳಲ್ಲಿ ಶತಕ ಮಹಾ ದಾಖಲೆ ಬರೆದ 14 ವರ್ಷದ ಬಾಲಕ ವೈಭವ್‌ ಸೂರ್ಯವಂಶಿ ಗದಗ : ಭೋವಿ ಸಮಾಜದ ಹೆಮ್ಮೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಟಿ ಬಿಸನಳ್ಳಿ ಗೆ ಗೌರವ ಡಾಕ್ಟರೇಟ್ ಪದವಿ