14.7 C
New York
Friday, May 9, 2025

Buy now

spot_img

ಗದಗ : ಅಪ್ರೆಂಟಿಶಿಪ್  ತರಬೇತಿಗಾಗಿ ನೇರ ಸಂದರ್ಶನದಲ್ಲಿ 112 ಆಭ್ಯರ್ಥಿಗಳು ಆಯ್ಕೆ

ಗದಗ  ಜುಲೈ 18 : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಮಹಿಳಾ) ಗದಗ ಬೇಟಗೇರಿಯಲ್ಲಿ ಗುರುವಾರ ಬೆಂಗಳೂರ ಎಚ್.ಎ.ಎಲ್ ಅವರಿಂದ ಅಪ್ರೆಂಟಿಶಿಪ್ (ಶಿಶಿಕ್ಷು) ತರಬೇತಿಗಾಗಿ ನೇರ ಸಂದರ್ಶನ ಏರ್ಪಡಿಸಲಾಗಿತ್ತು.

ಸಂದರ್ಶನಕ್ಕಾಗಿ ಆಗಮಿಸಿದ ಅವಿನಾಶ ಹಾಗೂ ಗಿರೀಶ ಎಚ್.ಎ.ಎಲ್ ಬೆಂಗಳೂರು ಇವರು ಅಭ್ಯರ್ಥಿಗಳಿಗೆ ತಾಂತ್ರಿಕ ತರಬೇತಿಯೊಂದಿಗೆ ಉತ್ತಮವಾದ ಜೀವನವನ್ನು ರೂಪಿಸಿಕೊಳ್ಳಲು ತಿಳಿಸುತ್ತಾ ಅಪ್ರೆಂಟಿಶಿಪ್ ನೇರ ಸಂದರ್ಶನಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದರು.

ಬೆಳಗಾವಿ ವಿಭಾಗದ ಸಹಾಯಕ ಅಪ್ರೆಂಟಿಶಿಪ್ ಸಲಹೆಗಾರರಾದ ಹಾಗೂ ಸಂಸ್ಥೆಯ ನೋಡಲ್ ಅಧಿಕಾರಿ/ಪ್ರಾಚಾರ್ಯರಾದ ಡಾ.ಮಲ್ಲೂರ ಬಸವರಾಜ, ಇವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅಪ್ರೆಂಟಿಶಿಪ್ ಬಗ್ಗೆ ವಿವರವಾಗಿ ತಿಳಿಸುತ್ತಾ ಸದರಿ ನೇರ ಸಂದರ್ಶನಕ್ಕೆ ಭಾಗವಹಿಸಿದ ತರಬೇತಿದಾರರು ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳುವಂತೆ ಅಭ್ಯರ್ಥಿಗಳಿಗೆ ಸಲಹೆಯನ್ನು ನೀಡಿದರು.

ತಾಲೂಕಾ ನೋಡಲ್ ಅಧಿಕಾರಿ ಎಲ್. ವಾಯ್. ತಳವಾರ, ಪ್ಲೇಸಮೆಂಟ ಅಧಿಕಾರಿಯಾದ ಬಡೆಸಾಬ್ ತೋಟದ ಸಿಬ್ಬಂದಿಯವರಾದ ಶ್ರೀಮತಿ ಭಾರತಿ ಸುಂಕದ, ಶ್ರೀಮತಿ ವಾಣಿಶ್ರೀ ಕುಲಕರ್ಣಿ, ಶ್ರೀಮತಿ ಸುನಿತಾ ಸಾಕೇನವರ, ಗಂಗಾಧರ ತಳವಾರ, ಮಹಮ್ಮದ ಅಲಿ ನಧಾಪ್, ಮತ್ತು ಜಿಲ್ಲೆಯ ಸರಕಾರಿ/ಅನುದಾನಿತ/ಖಾಸಗಿ ಐ.ಟಿ.ಐ. ಪ್ರಾಚಾರ್ಯರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ನಾರಾಯಣ ಚಿತ್ರಗಾರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ನೇರ ಸಂದರ್ಶನದಲ್ಲಿ ಜಿಲ್ಲೆಯ ಒಟ್ಟು 189 ಅಭ್ಯರ್ಥಿಗಳಲ್ಲಿ 112 ಅಭ್ಯರ್ಥಿಗಳು ಅಪ್ರೆಂಟಿಶಿಪ್ (ಶಿಶಿಕ್ಷು) ತರಬೇತಿಗಾಗಿ ಆಯ್ಕೆಯಾಗಿದ್ದಾರೆ. 80 ವಿಧ್ಯಾರ್ಥಿಗಳು ಎರಡನೇ ವರ್ಷದ ಪರೀಕ್ಷಾ ನಂತರದ ಎರಡನೇ ಸುತ್ತಿಗೆ ಆಯ್ಕೆಯಾಗಿರುತ್ತಾರೆ ಎಂದು ನೋಡಲ್ ಅಧಿಕಾರಿ ಪ್ರಾಚಾರ್ಯ ಡಾ.ಮಲ್ಲೂರ ಬಸವರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe
- Advertisement -spot_img

Latest Articles

Latest news
ಗದಗ : ಯುದ್ಧ ಪರಿಸ್ಥಿತಿ ನಿರ್ವಹಣೆಗೆ ಸನ್ನದ್ಧರಾಗಲು ಜಿಲ್ಲಾಧಿಕಾರಿ ಕರೆ ಗದಗ : ITBP ಯೋಧನ ಕೆಲಸವನ್ನು ತಕ್ಷಣವೇ ಮಾಡಿ ಬಿಳ್ಕೋಟ ಗದಗ ಹಿರಿಯ ಉಪನೋಂದಣೆ ಅಧಿಕಾರಿಗಳು ಗದಗ : ಗ್ರಾ.ಪಂ. ವಿವಿಧ ಕಾರಣಗಳಿಂದ ತೆರವಾಗಿರುವ / ಖಾಲಿ ಉಳಿದಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಮುಂಡರಗಿ : ಸಾಂಕ್ರಾಮಿಕ ರೋಗಗಳ ಜಾಗೃತಿ ಮತ್ತು ಉಚಿತ ತಪಾಸಣಾ ಶಿಬಿರ ಅಡವಿಸೋಮಾಪುರ ಗ್ರಾ.ಪಂ ನೂತನ ಅಧ್ಯಕ್ಷೆಯಾಗಿ ಪವಿತ್ರ ಹೊಸಳ್ಳಿ ಆಯ್ಕೆ ಗದಗ : ಮೇ 14 ರಂದು ಲೋಕಾಯುಕ್ತ ಜನ ಸಂಪರ್ಕ ಸಭೆ ಪಂಚಗ್ಯಾರಂಟಿಯಿಂದ ಭ್ರಷ್ಟಾಚಾರ ರಹಿತವಾಗಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕಾರ್ಯ: ಎ... ಗದಗ : ಲಂಚ ಸ್ವೀಕಾರ : ವಕ್ಫ್ ಅಧಿಕಾರಿ ಲೋಕಾಯುಕ್ತ ಬಲೆಗೆ ! ಗದಗ : ಮನೆಯಲ್ಲೇ ನೇಣಿಗೆ ಶರಣಾದ ನವದಂಪತಿ! ‘ಜ್ಞಾನ ಅಂಚೆ’ ಸೇವೆ ಪ್ರಕಾಶಕರು ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ಉಪಯುಕ್ತ: ಜಯದೇವ ಕಡಗಿ