ಡಂಬಳ : ವಿಕ್ಟೋರಿಯಾ ಕೆರೆಗೆ ಈಜಲು ತೆರಳಿದ್ದ‌ ಬಾಲಕ ಶವವಾಗಿ ಪತ್ತೆ

ಗದಗ ಜಿಲ್ಲೆ ಡಂಬಳ ಗ್ರಾಮದ ವಿಕ್ಟೋರಿಯಾ‌ ಮಹಾರಾಣಿ ಕೆರೆಯಲ್ಲಿ ಘಟನೆ ನಡೆದಿದ್ದು, ಅರುಣ ಸಿದ್ಧಪ್ಪ ಯತ್ನಳ್ಳಿ (17) ಎಂಬ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ.

ಅರುಣ ಸಿದ್ಧಪ್ಪ ಮಂಗಳವಾರ ತನ್ನ ಮೂವರು ಗೆಳೆಯರೊಂದಿಗೆ ಕೆರೆಗೆ ಈಜಲು ತೆರಳಿದ್ದ. ಈ ವೇಳೆ ಕೆರೆಯಲ್ಲಿನ ಗುಂಡಿಯಲ್ಲಿ‌ ಸಿಲುಕಿ ನೀರಿನಲ್ಲಿ ಮುಳಗಿದ್ದ. ಮಂಗಳವಾರ ಸಂಜೆಯವರೆಗೆ ನಿರಂತರ ಶೋಧ ಕಾರ್ಯ ನಡೆಸಿದ್ದರೂ ಬಾಲಕ ಪತ್ತೆಯಾಗಿರಲಿಲ್ಲ. ಬುಧವಾರ ನುರಿತ ಈಜುಗಾರರ ಮೂಲಕ ಜಾಲಾಡಿದಾಗ ಆತನ ಶವ ಪತ್ತೆಯಾಗಿದೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *