ಗದಗ : ಗಾಂಜಾ ಬೆಳೆದ ಅರೋಪಿಗೆ 15 ವರ್ಷ ಕಠಿಣ ಶಿಕ್ಷೆ 2 ಲಕ್ಷ ದಂಡ ವಿಧಿಸಿ ಗದಗ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ

ಗದಗ : ತನ್ನ ಸ್ವಂತ ಜಮೀನಿನಲ್ಲಿ ಗಾಂಜಾ ಬೆಳೆದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿ ಗ್ರಾಮದ ಉಡಚಪ್ಪ ಬಸವಣ್ಣೆಪ್ಪ ಪುರದ ಎಂಬ ವ್ಯಕ್ತಿಗೆ ಗದಗ ಜಿಲ್ಲಾ ಸತ್ರ ನ್ಯಾಯಾಲಯ 15 ವರ್ಷ ಕಠಿಣ ಶಿಕ್ಷೆ ಜೊತೆಗೆ 2 ಲಕ್ಷ ರೂ.ದಂಡ ವಿಧಿಸಿ ಆದೇಶ ನೀಡಿದೆ.

ನ. 9, 2013ರಂದು ಅಂದಿನ ಪ್ರೊಬೆಷನರಿ ಡಿವೈಎಸ್​ಪಿ ಆಗಿದ್ದ ಬಿ.ಎಸ್​. ನೇಮಗೌಡ (ಇಂದಿನ ಎಸ್ಪಿ) ನೇತೃತ್ವದಲ್ಲಿ ಉಡಚಪ್ಪನ ಹೊಲದಲ್ಲಿ ದಾಳಿ ಮಾಡಿ ಅಂದಾಜು 101 ಕೆಜಿ ಗಾಂಜಾ ಸ್ವತ್ತು ವಶಪಡಿಸಿಕೊಳ್ಳಲಾಗಿತ್ತು. ಹತ್ತಿ ಮತ್ತು ತೊಗರಿ ಬೆಳೆಯ ನಡುವೆ ಉಡಚಪ್ಪ ಗಾಂಜಾ ಬೆಳೆದಿದ್ದನು.

ಅಂದಾಜು 1 ಲಕ್ಷ ರೂ. ಮೌಲ್ಯದ ಗಾಂಜಾ ಇದಾಗಿತ್ತು. ಎನ್​ಡಿಪಿಎಸ್​ ಪ್ರಕರಣ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪಿಎಸ್​ಐ ಆರ್​.ಎಸ್​. ಕಟ್ಟಿಮನಿ ತನಿಖೆ ನಡೆಸಿ ಏಪ್ರಿಲ್​ 30, 2014ರಂದು ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಆರೋಪ ಸಾಭಿತಾದ ಹಿನ್ನೆಲೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಿದೆ.

Leave a Reply

Your email address will not be published. Required fields are marked *