Thursday, September 19, 2024
Google search engine
Homeಗದಗಗಜೇಂದ್ರಗಡಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು...

ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ

ಗದಗ  ಸೆಪ್ಟೆಂಬರ್ 17; ನಗರ ಸ್ಥಳೀಯ ಸಂಸ್ಥೆಗಳ ಸಾಮಾನ್ಯ /ವಿಶೇಷ ಸಭೆಗಳಲ್ಲಿ ನಿರ್ಣಯವಾಗುವ ಠರಾವುಗಳ ಕುರಿತು ಪಾರದರ್ಶಕತೆಯನ್ನು ಮತ್ತು ಹೊಣೆಗಾರಿಕೆಯನ್ನು ಕಾಯ್ದುಕೊಳ್ಳುವುದು ಅತ್ಯವಶ್ಯಕವಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಕೈಕೊಳ್ಳುವ ನಿರ್ಣಯಗಳು ಸಾರ್ವಜನಿಕರಿಗೆ ಗಮನಕ್ಕೆ ತರುವುದು ಆದ್ಯ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಗದಗ ಜಿಲ್ಲೆಯ 9 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾಮಾನ್ಯ/ವಿಶೇಷ ಸಭೆ ಜರುಗಿದ 3 ದಿನಗಳ ಒಳಗಾಗಿ ಕೈಬರಹದ ಠರಾವು ಪುಸ್ತಕದ ಪ್ರತಿ ಹಾಗೂ ಸದರ ಠರಾವಿನ ಯಥಾವತ್ತ ಗಣಕೀಕೃತ ಪ್ರತಿಯನ್ನು ಜಿಲ್ಲಾ ಎನ್.ಐ.ಸಿ ವೆಬ್‌ಸ್ಶೆಟ ( https://gadag.nic.in ) ನಲ್ಲಿ ಕಡ್ಡಾಯವಾಗಿ ಅಪಲೋಡ ಮಾಡಲು ಕ್ರಮವಹಿಸುವುದು. ಒಂದು ವೇಳೆ ಸಾಮಾನ್ಯ / ವಿಶೇಷ ಸಭೆ ಮುಕ್ತಾಯವಾದ 3 ದಿನಗಳ ಒಳಗಾಗಿ ಕೈಬರಹದ ಠರಾವು ಪುಸ್ತಕದ ಪ್ರತಿ ಹಾಗೂ ಸದರ ಠರಾವಿನ ಯಥಾವತ್ತ ಗಣಕೀಕೃತ ಪ್ರತಿಯನ್ನು ಜಿಲ್ಲಾ ಎನ್.ಐ.ಸಿ ವೆಬ್‌ಸೈಟನಲ್ಲಿ ಅಪಲೋಡ ಮಾಡಲು ಕ್ರಮವಹಿಸದೇ ಇದ್ದಲ್ಲಿ ಸೂಕ್ತ ಕ್ರಮವಹಿಸಲಾಗುವುದು. ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜರುಗುವ ಸಾಮಾನ್ಯ /ವಿಶೇಷ ಸಭೆಯಲ್ಲಿನ ಠರಾವುಗಳನ್ನು ಸದರ ಸಭೆ ಮುಕ್ತಾಯವಾದ 3 ದಿನಗಳ ಒಳಗಾಗಿ ಕೈಬರಹದ ಠರಾವು ಪುಸ್ತಕ ಹಾಗೂ ಸದರಿ ಠರಾವುಗಳ ಯಥಾವತ್ತ ಗಣಕೀಕೃತ ಠರಾವು ಪ್ರತಿಯನ್ನು ಜಿಲ್ಲಾ ಎನ್.ಐ.ಸಿ ವೆಬ್‌ಸೈಟನಲ್ಲಿ ಅಪಲೋಡ ಮಾಡಲು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು