ಗದಗ ಸಪ್ಟೆಂಬರ್ 8 :ನಾಗಾವಿ ಕ್ರಾಸ್,ಹರ್ತಿಯಿಂದ ಮುಳಗುಂದ ಪಟ್ಟಣದವರೆಗಿನ ರಸ್ತೆಯ ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿರಲಿ ಎಂದು ಸಚಿವ ಎಚ್ ಕೆ ಪಾಟೀಲ ಅವರು ಹೇಳಿದರು.
ಹರ್ತಿ ಗ್ರಾಮದಲ್ಲಿ ರವಿವಾರ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ, ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಲೆಕ್ಕ ಶೀರ್ಷಿಕೆ ಎಸ್. ಹೆಚ್. ಡಿ. ಪಿ. 2023-24 ನೇ ಸಾಲಿನ ಅಂದಾಜು
25 ಕೋಟಿಗಳ ಅನುದಾನದಲ್ಲಿ ನಿರ್ಮಿಸುವ ರಸ್ತೆ ಕಾಮಗಾರಿಯ ಭೂಮಿ ಪೂಜೆಯನ್ನು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಅವರು ನೆರವೇರಿಸಿ ಮಾತನಾಡಿದರು.
ಉತ್ತಮ ರಸ್ತೆಯಿಂದ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ,ವ್ಯಾಪಾರ ವಹಿವಾಟು ಹೆಚ್ಚಾಗುತ್ತದೆ ಹಾಗಾಗಿ ನಾಗಾವಿ ಕ್ರಾಸ್ ನಿಂದ ಮುಳಗುಂದ ಪಟ್ಟಣದವರೆಗೆ ನಿರ್ಮಾಣವಾಗುವ ರಸ್ತೆಯೂ ಉತ್ತಮ ಗುಣಮಟ್ಟದಿಂದ ಇರಬೇಕು ಮತ್ತು ನಿಯಮಿತ ಸಮಯದೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕರಿಗೆ ಸರಾಗವಾಗಿ ಸಾಗಲು ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಚಿ, ಅಶೋಕ ಮಂದಾಲಿ,ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ, ಕೆ.ವಿ.ಹಂಚಿನಾಳ ಗ್ರಾಮದ ಗಣ್ಯರು ಹಾಜರಿದ್ದರು.