ಗದಗ : ತಾಲೂಕಿನ ಅಡವಿಸೋಮಾಪುರ ಗ್ರಾಮದ ಶ್ರೀ ಗೋಣಿ ಬಸವೇಶ್ವರ ದೇವಸ್ಥಾನದ ಜೀರ್ಣೋದ್ಧಾರ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ಪ್ರವಚನ , ಅನ್ನ ಸಂತರ್ಪಣೆ ಮತ್ತು ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ನಿರಂತರ ಜರುಗಿದ್ದು. ಅಡವಿಸೋಮಾಪೂರ: ಗ್ರಾಮದ ಆರಾಧ್ಯ ದೈವ ಗೋಣಿ ಬಸವೇಶ್ವರನಿಗೆ ಶ್ರಾವಣ ಮಾಸದಲ್ಲಿ ನಿತ್ಯ ಪೂಜೆ ಶ್ರಾವಣ ಕಡೆ 18 ,19,/08/2025 ಸೋಮವಾರ ಜಾತ್ರಾ ಮಹೋತ್ಸವ ನಡೆಯಲಿದೆ.
ಭೂಲೋಕದ ಪ್ರಜೆಗಳ ಕಷ್ಟ ಪರಿಹರಿಸುವ ಮಹಾ ಪುರುಷ ಇವನಾಗುವನು. ಇವನು ಗೋಣಿ ಚೀಲದಲ್ಲಿ ಸಿಕ್ಕಿದ್ದರಿಂದ ಗೋಣಿ ಬಸವನೆಂದು ನಾಮಕರಣ ಮಾಡಿದರು.
ಗೋಣಿ ಬಸವ ಜನನ : ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿಯಲ್ಲಿ ಜನಿಸಿ ಭಕ್ತಿ ಮಾರ್ಗದಿಂದ ಜನರಿಗೆ ಧರ್ಮ ಬೋಧನೆ ದೇವರಲ್ಲಿ ನಂಬಿಕೆಯುಳ್ಳವರಾಗಿ ಬಾಳುವಂತೆ ಪ್ರೇರೆಪಿಸಿ ಅವರಿಗೆಲ್ಲ ಧನ, ಧಾನ್ಯ, ಸಮೃದ್ಧಿಯಾಗಿ ದೊರಕುವಂತೆ ಮಾಡಿ ಬಾಳಲು ಗೋಣಿ ಬಸವಣ್ಣನಿಗೆ ಶಿವಪಾರ್ವತಿ ಆಶೀರ್ವದಿಸಿದರು ಎಂಬ ಪ್ರತೀತಿ ಇದೆ.
ಗೋಣಿ ಬಸವಣ್ಣ ನಾಡಿನ ತುಂಬಾ ಸಂಚರಿಸಿ ಪವಾಡ ತೋರಿಸಿ 777 ಮಠ ಸ್ಥಾಪಿಸಿದನು. ಅಲ್ಲದೇ ಪಂಚಗಣಾಧೀಶ್ವರರ ಮಠಗಳು
ಬೆಟ್ಟದ ಮಲ್ಲೇಶ್ವರ, ಬಾಗಲಿ ಕಲ್ಮೇಶ್ವರ, ಕೊಟ್ಟೂರು ಕೊಟ್ಟೂರೇಶ್ವರ, ಕೋಲು ಶಾಂತೇಶ್ವರ, ಹಾಗೂ ಮದ್ದಾನೇಶ್ವರ ಮಠಗಳು ಗೋಚರಿಸಿ ಇಂದಿಗೂ ಜಾತ್ರೆ ಉತ್ಸವಗಳು ನಡೆಯುತ್ತವೆ. ಕೂಲಹಳ್ಳಿ ಗೋಣಿ ಬಸವಣ್ಣನ ಮೂಲ ಮಠವಾದರೆ ಗದಗ ಜಿಲ್ಲೆಯ ಗುಮ್ಮಗೋಳ, ವೆಂಕಟಾಪುರ, ಕುರ್ತುಕೋಟಿ ಅಲ್ಲದೇ ಇನ್ನೂ ಮುಂತಾದ ಗ್ರಾಮಗಳಲ್ಲಿ ಶಾಖಾಮಠ, ದೇವಸ್ಥಾನಗಳು ಇರುವುದು ಸಾಕ್ಷಿಯಾಗಿವೆ.
ಶ್ರಾವಣ ಮಾಸದ ಕೊನೆಯ ಸೋಮವಾರ ಜರುಗುವ ಅಡವಿಸೋಮಾಪೂರ ಗ್ರಾಮದ ಶ್ರೀ ಗೋಣಿ ಬಸವೇಶ್ವರ ಜಾತ್ರಾ ಮಹೋತ್ಸದ ಮುನ್ನ ಗ್ರಾಮದಿಂದ ಕೂಲಹಳ್ಳಿಗೆ ತೆರಳಿ ದೀಪ ಹಚ್ಚಿ ಬಂದ ನಂತರ ರಥೋತ್ಸವದ ಕಾರ್ಯಕ್ರಮಗಳು ಆರಂಭವಾಗುವುದು. ಪ್ರತಿ ದಿನ ಅನ್ನ ಸಂತರ್ಪಣೆ ಕಾರ್ಯಕ್ರಮ ಇರುವುದು.ಅಂದು ರಾತ್ರಿ ತವರಿದ್ದರೂ ತಬ್ಬಲಿಯಾದೆ ಎಂಬ ಸಾಮಾಜಿಕ ನಾಟಕ ರಾತ್ರಿ 10 ಗಂಟೆಗೆ ಪ್ರಾರಂಭವಾಗುವುದು.
ಮಂಗಳವಾರ 3 ಗಂಟೆಗೆ ಬಯಲು ಜಂಗಿ ಕುಸ್ತಿ ಗಳು ಮೂರು ದಿನಗಳ ಕಾಲ ನಡೆಯುವುದು. ಸಂಜೆ 5 ಗಂಟೆಗೆ ಕಡುಬಿನ ಕಾಳಗ ಜರುಗುವುದು.