ಗದಗ ಜೂನ್ 17: ಪಡಿತರ ಚೀಟ ಹೊಂದಿರುವ ಕುಟುಂಬ ಸದಸ್ಯರ ಇ ಕೆವೈಸಿಯನ್ನು ಜೂನ್ 30 ರೊಳಗಾಗಿ ಶೇ 100 ರಷ್ಟನ್ನು ಸಂಪೂರ್ಣಗೊಳಿಸಬೇಕಾಗಿರುವುದರಿAದ ಎಲ್ಲ ಪಡಿತರ ಚೀಟಿದಾರರು ಹಾಗೂ ಕುಟುಂಬ ಸದಸ್ಯರು ಜೂನ್ 30 ಒಳಗಾಗಿ ನ್ಯಾಯಬೆಲೆ ಅಂಗಡಿಗೆ ತೆರಳಿ ಕಡ್ಡಾಯವಾಗಿ ಇ ಕೆವೈಸಿ ಮಾಡಿಸಬೇಕು.
ಇ ಕೆವೈಸಿ ಮಾಡಲು ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರು ಊರಲ್ಲಿ ಇಲ್ಲದೆ ಇದ್ದ ಪಕ್ಷದಲ್ಲಿ ಪಡಿತರ ಚೀಟಿಯ ಸಂಖ್ಯೆ, ಆಧಾರ್ ಕಾರ್ಡ್ ದೊಂದಿಗೆ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆ ತಾಲೂಕು ಗ್ರಾಮದಲ್ಲಿರುವ ನ್ಯಾಯಬೆಲೆ ಅಂಗಡಿಯಲ್ಲಿ ಇ ಕೆವೈಸಿ ಮಾಡಿಕೊಳ್ಳಸಿಕೊಳ್ಳಬೇಕೆಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ