ಗದಗ ೦೬: ಎಸ್.ಎಮ್. ಕೃಷ್ಣ ನಗರದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ. ೧೨ ಗದಗ ಇಲ್ಲಿ ಇತ್ತೀಚಿಗೆ ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ಪ್ರಯೋಗ ಪ್ರದರ್ಶನ, ಪಾಠೋಪಕರಣ ಪ್ರದರ್ಶನ ಮತ್ತು ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಇವುಗಳನ್ನು ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಬಸವರಾಜ ಕಡೇಮನಿ, ಕೃಷ್ಣ ನಗರದ ಧುರೀಣರಾದ ಅನಿಲ ಸಿದ್ದಮ್ಮನಹಳ್ಳಿ, ಗಣ್ಯರಾದ ಎಲ್.ಎಮ್. ಮುಲ್ಲಾನವರ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್.ಸಿ. ನಾಗರಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಕೆ. ಮಂಗಳಗುಡ್ಡ, ಶಾಲೆಯ ಮುಖ್ಯೋಪಾದ್ಯಾಯರಾದ ಎಚ್.ಆರ್. ಕೋಣಿಮನಿ, ಎಸ್.ಡಿ.ಎಮ್.ಸಿ. ಸದಸ್ಯರು, ಉದ್ಘಾಟಿಸಿದರು, ನಂತರ ವಿದ್ಯಾರ್ಥಿಗಳ ಪ್ರಯೋಗ ಪ್ರದರ್ಶನವನ್ನು ವಿಕ್ಷೀಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ ವಿಜ್ಞಾನ ಶಿಕ್ಷಕರಾದ ಎಮ್.ಕೆ. ಹುಯಿಲಗೋಳ, ಚಿತ್ರಕಲಾ ಶಿಕ್ಷಕರಾದ ಜಗದೀಶ ಶೀಲವಂತ, ಶಿಕ್ಷಕರಾದ ಚಾಮರಾಜ ಹುಡೇದ, ಶರಣಪ್ಪ ವಕ್ಕಳದ, ಎಸ್.ಬಿ. ಮುಳಗುಂದ, ಎಮ್.ಎಚ್. ಬಳಬಟ್ಟಿ, ಎಸ್.ಬಿ. ಕನಕೆ ಮತ್ತು ಎಲ್ಲ ಶಿಕ್ಷಕರು, ಪಾಲಕರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.