ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಿಗೆ ಹಾಗೂ ಆಯುಕ್ತರಿಗೆ ಭಾರತ ರತ್ನ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಲಿಡಕರ್ ಹಿತ ಅಭಿವೃದ್ಧಿ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಪಲಕಗಳನ್ನು ಈ ಹಿಂದೆ ಪಾಲಿಕೆ ವತಿಯಿಂದ ತೆರವುಗೊಳಿಸಿದ್ದು ಪಾಲಿಕೆ ಅಧಿಕಾರಿಗಳ ನಿರ್ಲಕ್ಷತೆ ಮಾಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವ ಬಗ್ಗೆ. ಹಾಗೂ ನವೆಂಬರ್ 1ರ ಒಳಗಾಗಿ ಕರ್ನಾಟಕ ರಾಜ್ಯೋತ್ಸವ ಸಂದರ್ಭ ಜರಗುವ ಮುಂಚಿತವಾಗಿ ನಾಮಫಲಕಗಳನ್ನು ಅಳವಡಿಸುವ ಬಗ್ಗೆ ಮನವಿ ನೀಡಲಾಯಿತು,
ಈ ಸಂದರ್ಭದಲ್ಲಿ ಮಾಜಿ ಸದಸ್ಯರಾದ ಶ್ರೀ ದಾನಪ್ಪ ಕಬೇರ್, ಪಾಲಿಕೆಯ ಸದಸ್ಯರು ಶ್ರೀ ಶಂಭು ಸಾಲಮನಿ, ಶ್ರೀ ಪರಮೇಶ್ವರ ಮುರಗೋಡ, ಶ್ರೀ ರಮೇಶ್ ಎಸ್ ದೊಡವಾಡ, ಶ್ರೀ ಅಶೋಕ್ ಭಂಡಾರಿ, ಶ್ರೀ ಮಂಜುನಾಥ ದೊಡವಾಡ, ಶ್ರೀ ಪರಶುರಾಮ್ ಬೆಣಗಿ, ಶ್ರೀ ಚಿಕ್ಕಪ್ಪ, ಶ್ರೀ ಎಸ್ಎನ್ ರೋಣ, ಸಿ ಎಚ್ ಹಡಗಲಿ, ಶ್ರೀ ಸುರೇಶ್ ನವಲೂರು, ಶ್ರೀ ಶ್ರೀಧರ್ ವಕುಂದ, ಶ್ರೀ ಮಹೇಶ್ ಬೆಳಗಾವ್, ಮುಂತಾದ ಮುಖಂಡರು ಉಪಸ್ಥಿತರಿದ್ದರು.
ವರದಿ – A.A.ಜೋಡಗೇರಿ
ಧಾರವಾಡ ಜಿಲ್ಲಾ ವರದಿಗಾರರು