ಗದಗ : ಮಳೆಯಿಂದಾಗಿ ಹುಣಸಿಕಟ್ಟೆ ಬಳಿ ಹಳ್ಳದ ನೀರು ರಭಸವಾಗಿ ಹರಿಯುತ್ತಿದ್ದು, ಹಳ್ಳದ ನೀರಿನಲ್ಲಿ ಯುವಕರಿಬ್ಬರು ಕೊಚ್ಚಿ ಹೋದ ಘಟನೆ ನರಗುಂದ ತಾಲ್ಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ನಡೆದಿದೆ.
25 ವರ್ಷದ ಶಿವಪ್ಪ ಅವರಾದಿ ಇನ್ನು 26 ವರ್ಷದ ಮಣಿಕಂಠ ಮಲ್ಲಾಪೂರ ನೀರಿನಲ್ಲಿ ಕೊಚ್ಚಿ ಹೋದ ಯುವಕರು ಶಿವಪ್ಪ ಅವರಾದಿ ಎಂಬ ಯುವಕನ ಶವ ಪತ್ತೆಯಾಗಿದ್ದು
ಇನ್ನು 26 ವರ್ಷದ ಮಣಿಕಂಠ ಮಲ್ಲಾಪೂರ ಎಂಬ ಯುವಕನಿಗೆ ಶೋಧ ಕಾರ್ಯ ಮುಂದುವರೆದಿದೆ.
ಮಣಿಕಂಠನ ಹೆಂಡತಿ ನರಗುಂದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಸುರಿಯುತ್ತಿರುವ ಮಳೆಯಾದ್ದರಿಂದ ಮಣಿಕಂಠನ ಹೆಂಡತಿಗೆ ಹುಣಸಿಕಟ್ಟಿ ಗ್ರಾಮಕ್ಕೆ ಬರಲು ಸಾಧ್ಯವಾಗಿಲ್ಲ. ಆಗ ರಾತ್ರಿ 8 ಗಂಟೆ ಸುಮಾರಿಗೆ ಮಣಿಕಂಠ ತನ್ನ ಹೆಂಡತಿಯನ್ನು ಕರೆದುಕೊಂಡು ಬರಲು ಗೆಳೆಯ ಶಿವಪ್ಪನನ್ನು ಕರೆದುಕೊಂಡು ಹುಣಸಿಕಟ್ಟಿ ಗ್ರಾಮದಿಂದ ನರಗುಂದಕ್ಕೆ ಹೋಗಿದ್ದ. ಈ ವೇಳೆ ದುರ್ಘಟನೆ ಸಂಭವಿಸಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಸ್ಥಳಕ್ಕೆ ನರಗುಂದ ಶಾಸಕ ಸಿ.ಸಿ ಪಾಟೀಲ ಹಾಗೂ ಅಧಿಕಾರಿಗಳು ಭೇಟಿ ನೀಡಿದರು.
ನರಗುಂದ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.