ಗದಗ ೧೩: ಗದಗ-ಬೆಟಗೇರಿ ನಗರಸಭೆ ರಾಜೀವಗಾಂಧಿ ನಗರದಲ್ಲಿ ಲಿಂ. ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ೧೪ ಪುಣ್ಯಸ್ಮರಣೆಯನ್ನು ಡಾ. ಪಂಡಿತ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬೆಟಗೇರಿ ಬಡಾವಣೆ ರಾಜೀವಗಾಂಧಿ ನಗರ ಸಿಪಿಐ ಧೀರಜ್ ಸಿಂಧೆ, ಇಮಾಮಸಾಬ ಕಲೆಗಾರ, ರಮೇಶ ಚಲವಾದಿ, ಕರ್ನಾಟಕ ಪ್ರಜಾಶಕ್ತಿ ಕಮೀಟಿಯ ಅಧ್ಯಕ್ಷರಾದ ದಾದಾಪೀರ ಕಲೆಗಾರ, ರಾಜು ಕೋರ್ಪಡೆ, ಗದಗ-ಬೆಟಗೇರಿ ನಗರಸಭೆಯ ವಿರೋಧ ಪಕ್ಷದ ನಾಯಕರಾದ ಎಲ್. ಡಿ. ಚಂದಾವರಿ, ಹುಲಗಪ್ಪ ಚಿಮ್ಮಲಗಿ, ಇಮಾಮಸಾಬ ಮೊರಬದ, ಅಶೋಕ ಚಿಮ್ಮಲಗಿ, ಯೂಸೂಫ ಡಂಬಳ, ಇಮಾಮಸಾಬ ಮೊರಬದ, ಆಕಾಶ, ಪವನ, ನಾಗರಾಜ, ಉಮೇಶ, ರಮೇಶ ಚಲವಾದಿ, ಸೇರಿದಂತೆ ಅಟೋಚಾಲಕರು ಮತ್ತು ಮಾಲಕರು ಸೇರಿದಂತೆ ಅನೇಕ ಭಕ್ತಾಧಿಗಳು ಉಪಸ್ಥಿತರಿದ್ದರು.