Thursday, September 19, 2024
Google search engine
Homeಗದಗಗದಗ : ರೈತರ ಜಮೀನಿನಲ್ಲಿ ವಿದ್ಯುತ ಗೋಪುರ ನಿರ್ಮಾಣ :  ರೈತರಿಗೆ ವೈಜ್ಞಾನಿಕ ಪರಿಹಾರ...

ಗದಗ : ರೈತರ ಜಮೀನಿನಲ್ಲಿ ವಿದ್ಯುತ ಗೋಪುರ ನಿರ್ಮಾಣ :  ರೈತರಿಗೆ ವೈಜ್ಞಾನಿಕ ಪರಿಹಾರ ನೀಡುವಂತೆ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ 

ಗದಗ ೧೬: ಕೊಪ್ಪಳ ಜಿಲ್ಲೆ ಕುಷ್ಟಗಿ ಪಟ್ಟಣದಲ್ಲಿ ೨೫೦೦ ಎಮ್. ವಿ. ಎ ೪೦೦/೨೨೦ ಕೆ. ವಿ. ವಿದ್ಯುತ್ ಉಪಕೇಂದ್ರವನ್ನು ನಿರ್ಮಾಣ ಮತ್ತು ಅದಕ್ಕೆ ಸಂಬAಧಿಸಿದ ೪೦೦ ಕೆ. ವಿ. ಮತ್ತು ಕೆ. ವ್ಹಿ. ವಿದ್ಯುತ್ ಪ್ರಸರಣ ಮಾರ್ಗಗಳ ನಿರ್ಮಾಣ ಮಾಡುವ ಕಾಮಗಾರಿಯ ವಿಚಾರದಲ್ಲಿ ಭೂ ಪರಿಹಾರ ಬೆಲೆ ನಿಗದಿಪಡಿಸುವಂತೆ ಡಂಬಳ ಗ್ರಾಮದ ರೈತರು ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ರೈತರು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ರೈತರ ಜಮೀನಿನಲ್ಲಿ ಮಾಡುತ್ತಿರುವ ವಿದ್ಯುತ್ ಗೋಪುರ ನಿರ್ಮಣ ಮಾಡುತ್ತಿದ್ದು, ರೈತರಿಗೆ ಪರಿಹಾರವನ್ನು ಅವೈಜ್ಞಾನಿಕ ಪರಿಹಾರವನ್ನು ಜಿಲ್ಲಾಧಿಕಾರಿಗಳು ರೈತರಿಗೆ ಆದೇಶಿಸಿದ್ದು ಜಿಲ್ಲಾಧಿಕಾರಿಗಳ ಆದೇಶ ಪ್ರಕಾರ ಪ್ರತಿಚದರ ಮೀಟರಿಗೆ ೨೫೦೦ ರೂಪಾಯಿ ಮತ್ತು ತಂತಿಗೆ ೨೦ ರೂ ನಂತೆ ಬೆಳೆಹಾನಿ ಮತ್ತು ಇತರ ಹಾನಿ ಆದಲ್ಲಿ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದು ಈ ಪರಿಹಾರ ನಮಗೆ ಸಾಲುವುದಿಲ್ಲ. ಕಾರಣ ಮಾನ್ಯರು ಪುನಃ ಪರಿಶೀಲನೆ ಮಾಡಿ ನಮಗೆ ಪ್ರತಿ ಚದರ ಮೀಟರಗೆ ೩೫೦೦ ರೂ ರಂತೆ ಮತ್ತು ತಂತಿ ೫೦ ರೂ ಪ್ರತಿ ಚದರ ಮೀಟರಿಗೆ ಮತ್ತು ಬೆಳೆಹಾನಿ ಪರಿಹಾರ ಹೆಚ್ಚಿಸಿ ಪರಿಹಾರ ನೀಡಬೇಕು. ಸದರಿ ವಿದ್ಯುತ ಗೋಪುರ ನಿರ್ಮಾಣಕ್ಕೆ ಯಾವುದೇ ಅಡ್ಡಿ ಪಡಿಸುವುದಿಲ್ಲ ನಮಗೆ ಸಕಾಲಕ್ಕೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇವೆ ಹಾಯ್ದು ಹೋಗುವ ತಂತಿ ಕೆಳಗೆ ನಾವು ಎತ್ತರದ ಗಿಡ ಮರಗಳಿವೆ, ರೈತರ ಸಾಗುವಳಿಕೆ, ಕೊಳವೆ ಬಾವಿ, ದನಕರ ಮನುಷ್ಯನಿಗೆ ಅಪಾಯವಿದ್ದು, ಬೇರೆ ಇತರೆ ಕಾಮಗಾರಿ ಮಾಡುವಂತಿಲ್ಲ. ಮುಂದೆ ನಾವು ರೈತರು ಜಮೀನು ಮಾರಾಟ ಮಾಡಿದರೆ ಯಾರು ತೆಗೆದುಕೊಳ್ಳುವುದಿಲ್ಲ. ಕಾರಣ ಮಾನ್ಯ ಜಿಲ್ಲಾಧಿಕಾರಿಗಳು ಪುನಃ ಪರಿಶೀಲನೆ ಮಾಡಿ ಹೆಚ್ಚಿನ ಪರಿಹಾರಕ್ಕೆ ಆದೇಶ ಮಾಡಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ರೈತರಾದ ಜಗದೀಶ ಹಳ್ಳಿ, ಚನ್ನಬಸಪ್ಪ ಪಟ್ಟಣಶೆಟ್ಟಿ, ಶಂಕ್ರಯ್ಯ ಬಾಳಿಹಳ್ಳಿಮಠ, ಕುಷಪ್ಪ ಕದಡಿ, ಮುರಳೀಧರ ಹೊಸಮನಿ, ಮುಳ್ಳಪ್ಪ ಹಳ್ಳಾಕಾರ, ದೇವಪ್ಪ ಕೆರಳ್ಳಿ, ಗವಿಸಿದ್ದಪ್ಪ ಪಾರಪ್ಪನವರ, ಗುರಪ್ಪ ಹಟ್ಟಿ, ನಾಗಮ್ಮ ಆದಮ್ಮನವರ, ಅರ್ಜುನಪ್ಪ ಹೊಂಬಳ, ಆರ್. ಅರ್. ಕೊರ್ಲಗಟ್ಟಿ, ಜೆ. ಎಚ್. ಸಣ್ಣಪ್ಯಾಟಿ, ಹುಯಿಲಗೋಳ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ವಿದ್ಯುತ್ ನಿಲುಗಡೆ ಗದಗ : ಪ್ರಜೆಗಳೇ ಪ್ರಭುಗಳು, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಿ : ಸಚಿವ ಎಚ್.ಕೆ.ಪಾಟೀಲ ಗದಗ : ಜನರ ಆರೋಗ್ಯ ಕಾಪಾಡಲು ಸ್ವಚ್ಚತೆ ನಮ್ಮ ಮೊದಲ ಕರ್ತವ್ಯ : ಕೀರ್ತಿ, ಪಾಟೀಲ್ ರೋಣ : ಗ್ರಾಮ ಸುಂದರವಾಗಿ ಕಾಣಲು ಸ್ವಚ್ಚತೆ ಮೊದಲ ಆದ್ಯತೆ ಆಗಿರಲಿ : ತಾಪಂ ಇಓ ಮಂಜುಳಾ ಹಕಾರಿ.. ಗದಗ : ಸಾಮಾನ್ಯ/ ವಿಶೇಷ ಸಭೆಯಲ್ಲಿನ ಠರಾವು ಪುಸ್ತಕದ ಪ್ರತಿ ಎನ್.ಐ.ಸಿ.ವೆಬ್‌ಸೈಟಿನಲ್ಲಿ ಅಪಲೋಡ್ ಮಾಡುವುದು ಕಡ್ಡಾಯ ಗದಗ : ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ ಕಾರ್ಯಕ್ರಮ ಗದಗ : ಭೋವಿ ಸಮಾಜದ ತಾಲೂಕ ಅಧ್ಯಕ್ಷ ರಾಜು ಕಳ್ಳಿ ಅವರಿಗೆ ಸನ್ಮಾನ ಗದಗ : ಉಚಿತ ಮುಸ್ಲಿಂ ಧರ್ಮದ ಸಾಮೂಹಿಕ ಅದ್ದೂರಿ ವಿವಾಹ ಕಾರ್ಯಕ್ರಮ  ಗದಗ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ವಿಶ್ವ ದಾಖಲೆಯ ಮಾನವ ಸರಪಳಿ ನಿರ್ಮಾಣ ಗದಗ : ಶಿಕ್ಷಕರು, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ: ದಿಕ್ಕಾಪಾಲಾಗಿ ಓಡಿದ ಜನರು