ಗದಗ-೧೫: ಮಂಜು ಶಿಕ್ಷಣ ಸಂಸ್ಥೆಯ ಮಂಜು ಪ್ರಾಥಮಿಕ/ಪ್ರೌಢ ಶಾಲೆಯಲ್ಲಿ ೭೮ನೇ ಸ್ವಾತಂತ್ರೋತ್ಸವ ದಿನಾಚರಣೆ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಸಮಾರಂಭದ ಅಧ್ಯಕ್ಷತೆ ಸಂಸ್ಥೆಯ ಅಧ್ಯಕ್ಷರು ರಾಜ್ಯ ಪ್ರಶಸ್ತಿ ವಿಜೇತರಾದ ಶ್ರೀ ಶಂಕರಸಿಂಗ ಎಸ್. ರಜಪೂತ ವಹಿಸಿ ಧ್ವಜಾರೋಹಣ ನೆರವೇರಿಸಿ ಪ್ರಾಸ್ತಾವಿಕವಾಗಿ ಸ್ವಾತಂತ್ರೋತ್ಸವ ಬಗ್ಗೆ ನಮ್ಮ ದೇಶ ನಮ್ಮ ಹೆಮ್ಮೆ ಎಂಬ ವಿಚಾರವನ್ನು ಆಧಾರವಾಗಿಟ್ಟುಕೊಂಡು ಮಕ್ಕಳನ್ನು ಹಾಗೂ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿಯಾದ ಡಾ|| ಬಿ.ಆರ್.ಅಂಬೇಡ್ಕರರವರ ಭಾವಚಿತ್ರಕ್ಕೆ ಮಾಲಾರ್ಪಣೆಗೈದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸ್ವಾತಂತ್ರö್ಯ ಹೋರಾಟಗಾರರ ವೇಶಭೂಷಣಗಳನ್ನು ಧರಿಸುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟರು. ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ಜರುಗಿದವು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಸಂಸ್ಥೆಯ ಅಧ್ಯಕ್ಷರು ಶ್ರೀ ಶಂಕರಸಿAಗ ಎಸ್. ರಜಪೂತ, ಶಾಲಾ ಆಡಳಿತಾಧಿಕಾರಿಗಳಾದ ಶ್ರೀ ವಿನಾಯಕಸಿಂಗ ಎಸ್. ರಜಪೂತ, ಪ್ರಾಥಮಿಕ ವಿಭಾಗದ ಪ್ರಧಾನ ಗುರುಗಳಾದ ಶ್ರೀ ವೀರೇಶ ಎಸ್. ಹುಳ್ಳಿ, ಪ್ರೌಢ ವಿಭಾಗದ ಪ್ರಧಾನ ಗುರುಮಾತೆ ಶ್ರೀಮತಿ ಲಕ್ಷಿö್ಮÃ ಎಸ್. ಮುಳ್ಳಾಳ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆ ಸಹ ಶಿಕ್ಷಕಿಯರಾದ ಶ್ರೀಮತಿ ಅನಿತಾ ಕೋಪರ್ಡೆ ನಡೆಸಿಕೊಟ್ಟರೆ, ಶ್ರೀಮತಿ ಬಸಮ್ಮ ಕುಮ್ಮಿ ಇವರು ಸರ್ವರನ್ನು ಸ್ವಾಗಿತಿಸಿದರು. ಕೊನೆಯಲ್ಲಿ ಶ್ರೀಮತಿ ರತ್ನವ್ವ ಸುಂಕದ ಇವರು ವಂದನಾರ್ಪಣೆಗೈದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.