Monday, February 17, 2025
Google search engine
Homeಗದಗಗದಗ : ಶಿವಯೋಗಿ ರಾಮನಾಥ ಸ್ವಾಮಿಗಳವರ ಐದು ದಿನಗಳ ಜಲ ಅನುಷ್ಠಾನ ಇಂದು ಮುಕ್ತಾಯ  

ಗದಗ : ಶಿವಯೋಗಿ ರಾಮನಾಥ ಸ್ವಾಮಿಗಳವರ ಐದು ದಿನಗಳ ಜಲ ಅನುಷ್ಠಾನ ಇಂದು ಮುಕ್ತಾಯ  

ಗದಗ : ತಾಲೂಕಿನ ಹರ್ಲಾಪುರ ಗ್ರಾಮದ ಶ್ರೀ ಗುರು ಗೆಜ್ಜಿಸಿದ್ದೇಶ್ವರ ಮಠದಲ್ಲಿ ಅವದೂತ ಶಿವಯೋಗಿ ಶ್ರೀ ರಾಮನಾಥ ಸ್ವಾಮಿಗಳು ಜುಲೈ ೩೦ ರಿಂದ ಅಗಸ್ಟ್ ೩ರ ವರೆಗೆ ಐದು ದಿನಗಳ ಕಾಲ ಲೋಕ ಕಲ್ಯಾಣಾರ್ಥವಾಗಿ ಜಲ ಅನುಷ್ಠಾನ ಮಾಡಲಿದ್ದಾರೆ. ಆಗಸ್ಟ ೩ ರಂದು ಬೆಳಿಗ್ಗೆ ೧೧ ಗಂಟೆ ೧೫ ನಿಮಿಷಕ್ಕೆ ಜಲ ಅನುಷ್ಠಾನ ಮುಕ್ತಾಯಗೊಳ್ಳಲಿದೆ.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರ್ಲಾಪುರ ಗ್ರಾಮದ ಶಿವಯೋಗಿ ಅವಧೂತ ರಾಮನಾಥ ಸ್ವಾಮಿಗಳು ಅಧ್ಯಕ್ಷತೆ ವಹಿಸುವವರು. ದಿವ್ಯ ಸಾನಿಧ್ಯವನ್ನು ಪೂಜ್ಯಶ್ರೀ ಗುರು ಅಭಿನವ ಕೊಟ್ಟೂರೇಶ್ವರ ಮಹಾಸ್ವಾಮಿಗಳು, ಪೂಜ್ಯಶ್ರೀ ಪ್ರಭುಸ್ವಾಮಿಗಳು ಹಿರೇಮಠ, ಅನ್ವಾರಿಯ ಗಣೇಶ ಮುತ್ಯಾ ಅವದೂತರು, ಮಂಡ್ಯ ಜಿಲ್ಲೆಯ ಮದ್ದೂರಿನ ಎಂ.ಪಿ. ಹರೀಶಕುಮಾರ, ಹುಬ್ಬಳ್ಳಿಯ ಹರೀಶ ಮುತ್ಯಾ, ಅಳಂದ ತಾಲೂಕಿನ ಮೌನೇಶ ಮುತ್ಯಾ, ಮುದ್ದೇಬಿಹಾಳ ತಾಲೂಕಿನ ಸುಶಾಂತ ಮಹಾರಾಜರು ಸಾನಿಧ್ಯ ವಹಿಸುವರು.

ಮುಖ್ಯ ಅತಿಥಿಗಳಾಗಿ ರೋಣ ಶಾಸಕ ಜಿ.ಎಸ್. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಕೆ. ಪಾಟೀಲ, ಗದಗ-ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ, ಕೊಚಲಾಪೂರಿನ ಶಿವಶರಣೆ ಮಾತಾ ಲಕ್ಷ್ಮಮ್ಮ ತಾಯಿ, ಗೆಜ್ಜೆಸಿದ್ದೇಶ್ವರ ಗ್ರಾಮದ ಶಿವಶರಣೆ ಮಾತಾ ಲಕ್ಕಮ್ಮತಾಯಿ ಹಾಗೂ ಹರ್ಲಾಪುರ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಉಪಸ್ಥಿತರಿರುವರೆಂದು ಹರ್ಲಾಪುರ ಗ್ರಾಮದ ಭಕ್ತಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ ಗದಗ : ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್ ಅವರ ಪ್ರವಾಸ ಕಾರ್ಯಕ್ರಮ ಗದಗ : ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಪ್ರವಾಸ ಗದಗ : ಬೆಟಗೇರಿಯ  ಬಡ್ಡಿ ದಂಧೆಕೋರನ  ಖಜಾನೆ ಭೇದಿಸಿದ  ಗದಗ ಪೊಲೀಸರು ! ಮೈಕ್ರೋ ಫೈನಾನ್ಸ್ ಕಿರುಕುಳ ಬ್ರೇಕ್: ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಗದಗ : ತುಂಗಾಭದ್ರಾ ನದಿಯ ಅಕ್ರಮ ಮರಳು ಲೂಟಿಕೋರರಿಗೆ ಬೆಳ್ಳಂಬೆಳಗ್ಗೆ ಶಾಕ್ ಕೊಟ್ಟ ಜಿಲ್ಲಾಧಿಕಾರಿ.! ಗದಗ : ಸೈಬರ್ ಅಪರಾಧಗಳ ಸುರಕ್ಷಾ ಸಲಹೆಗಳನ್ನು ಪಾಲಿಸಿ ಸೈಬರ್ ವಂಚಿಕರಿಂದ ಎಚ್ಚರವಾಗಿರಿ ಗದಗ : ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ಗದಗ : ಜೀತ ಪದ್ಧತಿ ಒಂದು ಅಪರಾಧ : ಜಿಲ್ಲಾಧಿಕಾರಿ ಸಿ ಎನ್ ಶ್ರೀಧರ ಗದಗ : ಅಂತೂರ ಗ್ರಾಮ ಪಂಚಾಯಿತಿಗೆ ರಾಜ್ಯ ಮಟ್ಟದ ಅತ್ಯುತ್ತಮ ಗ್ರಾಮ ಪಂಚಾಯತ ಪುರಸ್ಕಾರ.