Wednesday, March 26, 2025
Google search engine
Homeಗದಗಗದಗ : ಆಲೂರು ವೆಂಕಟರಾಯ ರವರ 144 ನೇ ಜಯಂತೋತ್ಸವ

ಗದಗ : ಆಲೂರು ವೆಂಕಟರಾಯ ರವರ 144 ನೇ ಜಯಂತೋತ್ಸವ

ಹೊಳೆಆಲೂರು : ಗದಗ ಜಿಲ್ಲೆ ರೋಣ ತಾಲೂಕಿನ ಹೊಳೆಆಲೂರು ಗ್ರಾಮದಲ್ಲಿ ಆಲೂರು ವೆಂಕಟರಾಯ ರವರ 144 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕ ಅಧ್ಯಕ್ಷರಾದ ಎಂಎಚ್ ನದಾಫ್ ಇವರ ನೇತೃತ್ವದಲ್ಲಿ ಶ್ರೀ ಆಲೂರು ವೆಂಕಟರಾಯರ ಮೂರ್ತಿಗೆ ಪುಷ್ಪಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು.

ಶ್ರೀ ವೆಂಕಟರಾಯರ ಜಯಂತೋತ್ಸವದ ಅಂಗವಾಗಿ ಮಾತನಾಡಿದ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರೋಣ ತಾಲೂಕ ಅಧ್ಯಕ್ಷರಾದ ಎಂ ಎಚ್ ನದಾಫ್ ಕರ್ನಾಟಕ ಗತ ವೈಭವ ಗ್ರಂಥವನ್ನು ಕನ್ನಡಿಗರ ಕೈಗಿಟ್ಟ ಆಲೂರು ವೆಂಟಕರಾಯರು ಕನ್ನಡಿಗರಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿ ಬಡಿದೆಬ್ಬಿಸಿದ ಪರಿಣಾಮವೇ ಕರ್ನಾಟಕದ ಏಕೀಕರಣವಾಗಲು ಪ್ರಮುಖ ಕಾರಣವಾಯಿತು ಎಂದರು.

ತದ ನಂತರ ಸರಕಾರಿ ಪಾಲಿಟೆಕ್ನಿಕ ಮಹಾವಿದ್ಯಾಲಯದ ಆವರಣದಲ್ಲಿ ಸಸಿ ನಡೆಸುವ ಕಾರ್ಯಕ್ರಮವನ್ನು ನೆರವೇರಿಸಲಾಯಿತು ಈ ಸಂದರ್ಭದಲ್ಲಿ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಎಚ್ಚರೇಶ್ವರ ಮಹಾಸ್ವಾಮಿಗಳು, ದಿವಾನ್ ಶರೀಫ್ ಮುರುಗೇಂದ್ರ ಶ್ರೀಗಳು ಹಜರತ ಪೀರ್ ಶ್ರೀ ಎಮ್ ಆರ್ ಖಾನ್ ಬಾಬಾ ಗುರುಗಳು ದಿವ್ಯ ಸಾನಿಧ್ಯ ವಹಿಸಿದ್ದರು.

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ್ ಹಾದಿಮನಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮುರ್ತುಜಾ ಗೌಂಡಿ ಸರಕಾರಿ ಪಾಲಿಟೆಕ್ನಿಕಲ್ ಮಹಾವಿದ್ಯಾಲಯದ ಪ್ರಾಂಶುಪಾಲರು ಶ್ರೀ ವಿನೋದ ಸೋನಕರ. ಶರೀಫ್ ನದಾಫ ಸಂಕೇತ್ ದಾನರೆಡ್ಡೆರ ಸಂಜು ಮಾದರ ಕಾರ್ತಿಕ್ ಬಡಿಗೇರ್ ಲಿಯಾಖತ್ ಅಂಗಡಗೇರಿ ಶಂಕ್ರಪ್ಪಾ ತೆಗ್ಗಿ ಪರಶುರಾಮ್ ನಾಯ್ಕರ್ ಯಮನೂರುಸಾಬ್ ನದಾಫ್ ಸಂತೋಷ್ ರಾಜಪುರೋಹಿತ್ ರಿಜ್ವಾನ್ ಮುಲ್ಲಾ ಶರಣಪ್ಪ ಪೂಜಾರ ಹನುಮಂತ್ ಗುಳೇದಗುಡ್ಡ ಮೈಬ ನದಾಫ ನೂರಸಾಬ ನದಾಫ ಹಾಗೂ

ವಿದ್ಯಾರ್ಥಿಗಳು ಇನ್ನೂ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
ಗದಗ : ತಾಲೂಕು ಮಟ್ಟದ ನರೇಗಾ ಕಾಯಕ ಬಂಧುಗಳ ತರಬೇತಿ  ಗದಗ ಬಿಪಿನ್ ಚಿಕ್ಕಟ್ಟಿ ಲಿಟಲ್ ಮಿಲೇನಿಯಮ್ ಪ್ರಿ-ಸ್ಕೂಲ್ ಪದವಿ ಪ್ರಧಾನ ಸಮಾರಂಭ ೨೦೨೫ ಗದಗ : ಕೌಶಲ್ಯಾಭಿವೃದ್ಧಿ ತರಬೇತಿಗಾಗಿ ಅರ್ಜಿ ಆಹ್ವಾನ ಗದಗ : ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ಎಪ್ರೀಲ್-೧ ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭ ಗದಗ : ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಗದಗ : ತೆರಿಗೆ ವಸೂಲಿಯಲ್ಲಿ ಜಿಲ್ಲೆಗೆ ಲಕ್ಷ್ಮೇಶ್ವರ ಫಸ್ಟ್ ಗದಗ : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಪ್ರಕರಣ : ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ  ಗದಗ : ಅಪಘಾತ: ಕಾರ್ ಗೆ ಬೈಕ್ ಡಿಕ್ಕಿ ಹೊಡೆದು ಬಸ್ ಚಕ್ರದಡಿ ಸಿಲುಕಿ ಬೈಕ್ ಸವಾರ ಸ್ಥಳದಲ್ಲೇ ಸಾವು‌! ಗದಗ : ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆ ಕಾಣೆ