ಗದಗ ೯: ಇಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕದ ವತಿಯಿಂದ ರೋಣ ತಾಲೂಕ ಅಧ್ಯಕ್ಷರು ಎಂ ಎಚ್ ನದಾಫ್ ಹಾಗೂ ರೋಣ ತಾಲೂಕು ಉಪಾಧ್ಯಕ್ಷರಾದ ಬಸವರಾಜ್ ಹಾದಿಮನಿರವರ ನೇತೃತ್ವದಲ್ಲಿ ಹೊಳೆಆಲೂರ ನಿಂದ ಸೋಮನಕಟ್ಟಿ ಗ್ರಾಮಕ್ಕೆ ಬಸ್ಸಿನ ವ್ಯವಸ್ಥೆ ಕುರಿತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಗದಗ ವಿಭಾಗ ರೋಣ ಘಟಕದ ಅಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ಮನವಿ ಸಲ್ಲಿಸಿ ಎಮ್ ಎಚ್ ನದಾಫರವರು ಮಾತನಾಡಿ ಸದರಿ ವಿಷಯದವಾಗಿ ಸುಮಾರು ತಿಂಗಳಿನಿಂದ ವಿದ್ಯಾರ್ಥಿಗಳಿಗೆ ಬಸ್ಸಿನ ಅನುಕೂಲ ಇಲ್ಲದಿರುವುದರಿಂದ ಅನಾನುಕೂಲವಾಗಿರುತ್ತದೆ ಅಲ್ಲದೆ ಹೊಳೆಆಲೂರಿನಲ್ಲಿ ವಿವಿಧ ಶಾಲಾ ಕಾಲೇಜು ಇದ್ದುದ್ದು ಆ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಹೋಗಲು ತುಂಬಾ ತೊಂದರೆಯಾಗಿದೆ ಅಲ್ಲದೆ ಊರಿನ ಗ್ರಾಮಸ್ಥರಿಗೂ ಕೂಡ ತೊಂದರೆಯಾಗಿದೆ ಎಂದು ಆರೋಪಿಸುವ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಸೋಮನಕಟ್ಟಿ ಗ್ರಾಮದ ಅಧ್ಯಕ್ಷರಾದ ರಾಜು ಮುಲ್ಲಾ ರೋಣ ತಾಲ್ಲೂಕಿನ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷರಾದ ಸಂಕೇತ ದಾನರೆಡ್ಡಿ ಹಾಗೂ ಹೊಳೆಆಲೂರು ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಸಂಜು ಮಾದರ್ ಹಾಗೂ ವಿದ್ಯಾರ್ಥಿ ಘಟಕದ ಉಪಧ್ಯಕ್ಷರಾದ ಕಾರ್ತಿಕ್ ಬಡಿಗೇರ್ ಹಾಗೂ ಹೊಳೆಆಲೂರು ಗ್ರಾಮ ಘಟಕ ಉಪಾದಕ್ಷರಾದ ಶರೀಫ್ ನದಾಫ್, ಪ್ರವೀಣ್ ಪ್ರಸನ್ನವರ್ ರಮೇಶ್ ನಡುವಿನಮನಿ ಉಪಸ್ತಿರಿದ್ದರು.