ಗದಗ : ಬಾಗಲಕೋಟ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಲಕ್ಕುಂಡಿ ಗ್ರಾಮದಲ್ಲಿ ಇಂದು ಭರ್ಜರಿ ಪ್ರಚಾರ ನಡೆಸಿದರು.
ಇಂದು ಸಂಜೆ ಲಕ್ಕುಂಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆದ ರೋಡ ಶೋ ದಲ್ಲಿ ಮತಯಾಚನೆ ಮಾಡಿದರು. ಕಾಂಗ್ರೆಸ್ ಪಕ್ಷದ ಮುಖಂಡರಾದ ಸಚಿವ ಎಚ್ ಕೆ ಪಾಟೀಲ್ ಹಾಗೂ ,ಡಿ ಆರ್,ಪಾಟೀಲ್ ಬಿ, ಆರ್ ಯಾವಗಲ್ ,ವಾಸಣ್ಣ ಕುರುಡಗಿ, ಸಿದ್ದಲಿಂಗೇಶ್ವರ ಪಾಟೀಲ್ , ಪ್ರವಿಣ ಯಾವಗಲ್ , ಪ್ರಕಾಶ ಕರಿ, ವಿವೇಕ್ ಯಾವಗಲ್ , ಲಕ್ಕುಂಡಿ ಗ್ರಾಮದ ಕಾಂಗ್ರೆಸ್ ಮುಖಂಡರು, ಗ್ರಾಮದ ಮಹಿಳೆಯರು , ಯುವಕರು ಹಿರಿಯರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.
ಲಕ್ಕುಂಡಿ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಬಹಿರಂಗ ವೇದಿಕೆಯಲ್ಲಿ ಮಾತನಾಡಿದ ಮಾಜಿ ಸಚಿವ ಬಿ ಆರ್ ಯಾವಗಲ್ ಬಿಜೆಪಿ ನೀಡಿದ ಎಲ್ಲ ಭರವಸೆಗಳು ಎಲ್ಲಾ ಸುಳ್ಳು ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ವಾಸಣ್ಣ ಕುರುಡಗಿ ಮಾತನಾಡಿ ಬಿಜೆಪಿ ಭರವಸೆ ಗ್ಯಾಸ್ ಏರಿಕೆಯ ಅವರ ನಿಜವಾದ ಗ್ಯಾರಂಟಿಯಾಗಿದೆ. ಎಂದರು.
ಮಾಜಿ ಶಾಸಕರಾದ ಡಿ ಆರ್ ಪಾಟೀಲ್ ಮಾತನಾಡಿ ಕಾಂಗ್ರೆಸ್ ಪಕ್ಷ ಬಡವರ ಪಕ್ಷ ಮತ್ತು ಬಡವರಿಗೆ ಅನುಕೂಲವಾಗುವ ರೀತಿಯಲ್ಲಿ ನರೇಗಾ ಯೋಜನೆಯ ಜಾರಿಗೆ ತಂದಿದ್ದಾರೆ.
ಮಹಿಳೆಯರಿಗೆ ಮೀಸಲಾತಿ ಒದಗಿಸಿಕೊಡಲು ಕಾಂಗ್ರೆಸ್ ಬಹಳ ಹೋರಾಟ ನಡೆಸಿದೆ. ಕಾಂಗ್ರೆಸ್ ಪಕ್ಷದಿಂದ ಎಲ್ಲರಿಗೂ ಲಾಭವಾಗಿದೆ ನಿಮ್ಮೆಲ್ಲರ ಆಶೀರ್ವಾದದಿಂದ ಸಂಯುಕ್ತಾ ಪಾಟೀಲ್ ಎಂ ಪಿ ಆಗುತ್ತಾಳೆ ಎಂದು ಹೇಳಿದರು.
ಪಂಚ ಗ್ಯಾರಂಟಿ ಗಳನ್ನು ಜಾರಿಗೆ ತಂದರೇ ಸರ್ಕಾರ ದಿವಾಳಿ ಆಗುತ್ತೆ ಅಂತ ಪ್ರಧಾನಿ ಮೋದಿ ಹೇಳಿದರು ಸರ್ಕಾರ ದಿವಾಳಿ ಯಾಗುವುದು ಶ್ರೀಮಂತರ ಸಾಲಮನ್ನಾ ಮಾಡಿದರೆ ಸರ್ಕಾರ ದಿವಾಳಿಯಾಗುತ್ತೆ .ಬಡವರನ್ನ ಯಾರು ಪ್ರೀತಿಸುತ್ತಾರ ಅವರು ಕಾಂಗ್ರೆಸ್ಸನ್ನು ಪ್ರೀತಿಸುತ್ತಾರೆ. ಎಂದು ಸಚಿವ ಎಚ್ ಕೆ ಪಾಟೀಲ್ ಹೇಳಿದರು.
ಬಾಗಲಕೋಟ ಲೋಕಸಭಾ ಕ್ಷೇತದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲ್ ಮಾತನಾಡಿ ಶ್ರೀಮಂತರ ಸಾಲಮನ್ನಾ ಕೇಂದ್ರ ಸರ್ಕಾರ ಮಾಡಿದೆ. ಆದರೆ ರೈತರ ಸಾಲಾಮಾನ್ನ ಮಾಡಲು ದುಡ್ಡು ಇಲ್ಲ . ಒಲಿಂಪಿಕ್ಸ್ ಮಹಿಳಾ ಕ್ರೀಡಾಪಟುಗಳ ಲೈಂಗಿಕ ಕಿರುಕುಳ ಆದರು ಕ್ರೀಡಾಪಟುಗಳ ಪ್ರತಿಭಟನೆ ನಡೆಸಿದರು ಪ್ರಧಾನಿ ಮಂತ್ರಿ ಅವರನ್ನು ಕರೆಯಿಸಿ ಮಾತನಾಡಿಲಿಲ್ಲ ಇದು ಬಿಜೆಪಿ ಅವರ ಮನಸ್ಥಿತಿ .
ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಗೆ ಹೋಗುವಾಗ ರೈತರ ಟ್ರಾಕ್ಟರ್ ಪಂಚರ್ ಮಾಡಿದ ಬಿಜೆಪಿ ಸರ್ಕಾರ.ಎಂದು ಕಿಡಿಕಾರಿದರು.